ಪರ್ಯಾಯಕ್ಕೆ ಹೊರೆಕಾಣಿಕೆಯಾಗಿ ಬಂದ ಮಟ್ಟುಗುಳ್ಳ

Update: 2018-01-16 15:08 GMT

ಉಡುಪಿ, ಜ.16: ಶ್ರೀ ಪಲಿಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಕಟಪಾಡಿ ಮಟ್ಟುವಿನ ಗ್ರಾಮಸ್ಥರು ಇಂದು ಸಂಜೆ 18,000 ಮಟ್ಟು ಗುಳವನ್ನು ಹೊರೆಕಾಣಿಕೆಯಾಗಿ ತಂದು ಸಮರ್ಪಿಸಿದರು. ಅಲ್ಲದೇ ಕಾರ್ಪೋರೇಷನ್ ಬ್ಯಾಂಕ್ ಹಾಗೂ ಉಡುಪಿ ಜಿಲ್ಲೆಯ ಶ್ರೀಕೃಷ್ಣ ಪ್ರಸಾದ ಚಿಣ್ಣರ ಸಂತರ್ಪಣೆ ಶಾಲೆಗಳ ಒಕ್ಕೂಟದವರು ಸಹ ಮೆರವಣಿಗೆಯಲ್ಲಿ ಹೊರೆಕಾಣಿಕೆಯನ್ನು ತಂದು ಗುರುವಾರ ನಡೆಯುವ ಪರ್ಯಾಯಕ್ಕೆ ಅರ್ಪಿಸಿದರು.

ಮೆರವಣಿಗೆಯಲ್ಲಿ ಬಂದ ಎಲ್ಲರಿಗೂ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಅನುಗ್ರಹ ಮಂತ್ರಾಕ್ಷತೆ ನೀಡಿದರು. ಈ ಸಂದರ್ಭದಲ್ಲಿ ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ,ಡಾ.ಟಿ.ಎಸ್.ರಾವ್ ಪ್ರದೀಪ್ ಕುಮಾರ್, ಸರಸು ಡಿ.ಬಂಗೇರ, ಗಣೇಶ್ ಕುಮಾರ್, ಗಣೇಶ್ ಮೇಲಂಟ, ಲಕ್ಷ್ಮಣ ಪೂಜಾರಿ, ಕೃಷ್ಣ ಪ್ರಸಾದ ಚಿಣ್ಣರ ಸಂತರ್ಪಣೆ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಮಾಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News