ಗಂಗೊಳ್ಳಿ ಬೈಕ್ಗೆ ಬೆಂಕಿ ಪ್ರಕರಣದ ಆರೋಪಿ ಅಮಾಯಕ: ಬಿಜೆಪಿ
Update: 2018-01-16 15:30 GMT
ಕುಂದಾಪುರ, ಜ.16: ಗಂಗೊಳ್ಳಿ ಬೈಕ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರು ಅಮಾಯಕ ಗುರುರಾಜ್ ಖಾರ್ವಿಯನ್ನು ಬಂಧಿಸಿದ್ದಾರೆ ಎಂದು ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಆರೋಪಿಸಿದ್ದಾರೆ.
ಕುಂದಾಪುರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಅಮಾಯಕ, ನಿರಾಪರಾಧಿಯಾಗಿರುವ ಗುರುರಾಜ್ ಖಾರ್ವಿಯನ್ನು ಬಂಧಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಸರಕಾರವು ಹಿಂದೂಗಳನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚು ಅಡಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷಹರೀಶ್ ಮೇಸ್ತ ಉಪಸ್ಥಿತರಿದ್ದರು.