ಮೂಡುಬಿದಿರೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವು ಶಿಬಿರ

Update: 2018-01-18 12:51 GMT

ಮೂಡುಬಿದಿರೆ, ಜ. 18: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ  ವತಿಯಿಂದ  ನಡೆಸುವ 'ಕಲಿಯೋಣ ಕಂಪ್ಯೂಟರ್ - ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವು ಶಿಬಿರ' ಕಾರ್ಯಕ್ರಮವನ್ನು ಈ ಬಾರಿ ಕಳಸದ  ಜೆ.ಇ.ಎಂ . ಪ್ರೌಢಶಾಲೆಯಲ್ಲಿ ನಡೆಸಲಾಯಿತು. ಈ ಶಿಬಿರವು ಜ.17 ರಿಂದ 19 ರವರೆಗೆ  ಜರುಗಲಿದೆ.

ಶಿಬಿರವನ್ನು ಉದ್ಘಾಟಿಸಿದ ವಿಭಾಗದ ಮುಖ್ಯಸ್ಥ ಡಾ . ಮಂಜುನಾಥ ಕೊಠಾರಿ ಮಾತನಾಡಿ , " ಪ್ರತಿ ವರ್ಷ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ  ಕಂಪ್ಯೂಟರ್ ಸೈನ್ಸ್ ವಿಭಾಗದ  ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದ ಕೊರತೆಯಿರುವ ಗ್ರಾಮೀಣ ಭಾಗಗಳ ಶಾಲೆಗಳಿಗೆ ತೆರಳಿ ಅಲ್ಲಿ ಮಕ್ಕಳಿಗೆ  ಕಂಪ್ಯೂ ಟರ್ ಕಲಿಸುತ್ತಾರೆ. ಇದರ ಜೊತೆಗೆ ವೆಬ್ ಸೈಟ್ ತಯಾರಿ , ಇಂಟರ್ನೆಟ್ ಮತ್ತು ಪ್ರೋಗ್ರಾಮಿಂಗ್ ಬಗ್ಗೆಯೂ ತರಬೇತಿ ನೀಡಲಾಗುತ್ತದೆ" ಎಂದರು. ಕಳಸ ಶಿಕ್ಷಣ ಸೊಸೈಟಿಯ ಅಧ್ಯಕ್ಷ ಶ್ರೀಕಾಂತ್ ಶುಭಹಾರೈಸಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವರಿಗೆ ಕೃತಜ್ಞತೆ ಅರ್ಪಿಸಿದರು.

ಕಳಸ ಶಿಕ್ಷಣ ಸೊಸೈಟಿ ಕಾರ್ಯದರ್ಶಿ ಗೋಪಿನಾಥ್ ಪೈ, ಮುಖ್ಯ ಶಿಕ್ಷಕಿ ಸುನಂದಾ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಹೇಮಂತ್, ಶ್ರುತಿ ಶೆಟ್ಟಿ, ವಿವೇಕ್ ಶರ್ಮ ಮತ್ತು ಅಂಕಿತಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News