ಕರ್ಣಾಟಕ ಬ್ಯಾಂಕ್‌ಗೆ ಪ್ರತಿಷ್ಠಿತ ಪುರಸ್ಕಾರ

Update: 2018-01-18 17:37 GMT

ಮಂಗಳೂರು, ಜ.18: ರಫ್ತು ವ್ಯವಹಾರಕ್ಕೆ ನೀಡಿರುವ ಪ್ರೋತ್ಸಾಹಕ್ಕಾಗಿ ಕರ್ಣಾಟಕ ಬ್ಯಾಂಕ್‌ಗೆ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ(ಎಫ್‌ಐಇಒ) ನೀಡುವ ಪ್ರತಿಷ್ಠಿತ ‘ ದಕ್ಷಿಣ ವಲಯದಲ್ಲಿ ಅತ್ಯುತ್ತಮ ಹಣಕಾಸು ಸೇವೆ ಹಾಗೂ ವಿದೇಶಿ ವಿನಿಮಯ ಗಳಿಸಿದ ಬ್ಯಾಂಕ್’ ಎಂಬ ಪ್ರಶಸ್ತಿ ಸಂದಿದೆ.

ದಕ್ಷಿಣ ವಲಯದಲ್ಲಿ 2016-17ರ ಸಾಲಿನಲ್ಲಿ ಅತ್ಯುತ್ತಮ ಹಣಕಾಸು ಸೇವೆ ಹಾಗೂ ವಿದೇಶಿ ವಿನಿಮಯ ಗಳಿಸಿದ ಕರ್ಣಾಟಕ ಬ್ಯಾಂಕ್‌ಗೆ ‘ಎಫ್‌ಐಇಒ ಗೋಲ್ಡ್’ ವಿಭಾಗದಲ್ಲಿ ಪುರಸ್ಕಾರ ಸಂದಿದ್ದು ಚೆನ್ನೈಯಲ್ಲಿ ಗುರುವಾರ ನಡೆದ ಪುರಸ್ಕಾರ ಪ್ರಧಾನ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು  ಪುರಸ್ಕಾರ ಹಸ್ತಾಂತರಿಸಿದರು.

ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಭಟ್ ಎಂ. ಬ್ಯಾಂಕ್‌ನ ಪರವಾಗಿ ಪುರಸ್ಕಾರ ಸ್ವೀಕರಿಸಿದರು. ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಎಫ್‌ಐಇಒ ದಕ್ಷಿಣ ವಲಯ ವಲಯಾಧ್ಯಕ್ಷ ಡಾ ಎ.ಶಕ್ತಿವೇಲ್, ಕರ್ಣಾಟಕ ಬ್ಯಾಂಕ್‌ನ ಚೆನ್ನೈ ವಲಯದ ಎಜಿಎಂ ಪ್ರಸಂಧನ್ ಥೆನಿಶೆರಿ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News