ದಲಿತರ ಆಕ್ರೋಶದ ಹಿಂದೆ ಅಂತರಾಷ್ಟ್ರೀಯ ಪಿತೂರಿ ಇದೆ ಎಂದ ಬಿಜೆಪಿ ಪ್ರ. ಕಾರ್ಯದರ್ಶಿ

Update: 2018-01-19 16:53 GMT

ಹೊಸದಿಲ್ಲಿ, ಜ.19: ದಲಿತರ ಅಸಮಾಧಾನಕ್ಕೆ ಅಂತರಾಷ್ಟ್ರೀಯ ಪಿತೂರಿಯ ಮೂಲಕ ತುಪ್ಪ ಸುರಿಯುವ ಕೆಲಸ ನಡೆಯುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯ ಹೇಳಿದ್ದಾರೆ.

  ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಶಕ್ತಿಗಳು ಸಮಾಜದಲ್ಲಿ ಒಗ್ಗಟ್ಟಿರಲು ಬಯಸುವುದಿಲ್ಲ. ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು. ಆದರೆ ಈ ‘ಶಕ್ತಿ’ಗಳು ಯಾರೆಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ಸೂಕ್ತ ಸಮಯದಲ್ಲಿ ಇದನ್ನು ಬಹಿರಂಗಪಡಿಸಲಾಗುವುದು . ಜನರಿಂದ ಮೂಲೆಗುಂಪಾದ ಕೆಲವು ರಾಜಕೀಯ ಪಕ್ಷಗಳೂ ದಲಿತರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ ಎಂದು ನುಡಿದರು.

 ಪದ್ಮಾವತ್ ಸಿನೆಮಾದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿರ್ಮಾಪಕರು ಸಮುದಾಯದ ಪ್ರತಿಷ್ಠೆಗೆ ಘಾಸಿ ಎಸಗುವ ವಿಷಯದ ಬಗ್ಗೆ ಸಿನೆಮಾ ಮಾಡಬಾರದು .ಸಾಮಾಜಿಕ ಭಾವನೆಗಳಿಗೆ ಗೌರವ ನೀಡಬೇಕು ಎಂದರು. ಸಿನೆಮಾದ ಪರ ಅಥವಾ ವಿರೋಧವಾಗಿ ನಾನು ಏನನ್ನೂ ಹೇಳುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಸಂವಿಧಾನ ಮತ್ತು ನ್ಯಾಯಾಲಯವನ್ನು ಗೌರವಿಸಬೇಕು ಎಂದು ಕೈಲಾಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News