ಕಾವೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಶೀರ್ ರಿಗೆ ಸಂತಾಪ ಸಭೆ
Update: 2018-01-19 17:41 GMT
ಮಂಗಳೂರು, ಜ. 19: ಕೂಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ವತಿಯಿಂದ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಮಾಯಕ ಬಶೀರ್ ಆಕಾಶಭವನ ರವರ ಮರಣದ ಸಂತಾಪ ಸೂಚನೆ ಸಭೆ ಮತ್ತು ಈ ಹತ್ಯೆಯ ಖಂಡನಾ ಸಭೆಯು ಕಾವೂರು ಜಂಕ್ಷನ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎಮ್ ಜೆ ಎಮ್ ಇದರ ಅಧ್ಯಕ್ಷ ಕೆ ಎಮ್ ಶರೀಫ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ ಎಮ್ ಜೆ ಎಮ್ ಖತೀಬ್ ಬಶೀರ್ ಮದನಿ ಅಲ್ ಕಾಮಿಲ್ ಮುಖ್ಯ ಭಾಷಣ ಮಾಡಿದರು ಹಾಗೂ ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸ್ಜಿದ್ ಕಾವೂರು ಇದರ ಖತೀಬ್ ಇಬ್ರಾಹಿಮ್ ಖಲೀಲ್ ಅಮ್ಜದಿ ಹಾಗೂ ಅಲ್ ಫಾರೂಕ್ ಜುಮಾ ಮಸ್ಜಿದ್ ಶಾಂತಿನಗರದ ಖತೀಬ್ ಇಲ್ಯಾಸ್ ಸಅದಿ ಉಪಸ್ತಿತರಿದ್ದರು.
ಕಾರ್ಯಕ್ರಮದಲ್ಲಿ ಕೆ ಎಮ್ ಜೆ ಎಮ್ ಕಾರ್ಯದರ್ಶಿಯಾದ ರಫೀಕ್ ಕೂಳೂರು ಸ್ವಾಗತಿಸಿದರು ಮತ್ತು ಜೊತೆ ಕಾರ್ಯದರ್ಶಿ ಹಕೀಮ್ ಕಾರ್ಯಕ್ರಮವನ್ನು ನಿರೂಪಿಸಿದರು.