ಅಜೆಕಾರು: ಬಾವಿಗೆ ಬಿದ್ದು ಯುವಕ ಮೃತ್ಯು
Update: 2018-01-19 17:39 GMT
ಅಜೆಕಾರು, ಜ.18: ಹತ್ತಿರದ ಮನೆಯವರ ಬಾವಿಗೆ ಬಿದ್ದ ಬೆಕ್ಕನ್ನು ತೆಗೆಯಲು ಬಾವಿಗಿಳಿದ ಯುವಕನೊಬ್ಬ ಅಕಸ್ಮಿಕವಾಗಿ ಹಗ್ಗ ತುಂಡಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಡ್ತಲ ಗ್ರಾಮದ ಕಂಬಳಗುಡಡೆ ಎಂಬಲ್ಲಿಂದ ಗುರುವಾರ ವರದಿಯಾಗಿದೆ.
ಇಲ್ಲಿನ ಕಂಬಳಗುಡ್ಡೆ ನಿವಾಸಿ ಆನಂದ ನಾಯಕ್ ಎಂಬವರ ಮಗನಾದ ಅಕ್ಷಯ (20), ಹತ್ತಿರದ ಮನೆಯವರ ಬಾವಿಗೆ ಬಿದ್ದ ಬೆಕ್ಕನ್ನು ತೆಗೆಯಲು ಬಾವಿಗಿಳಿದ ಸಂದರ್ಭ ಬಾವಿಗೆ ಕಟ್ಟಿದ ಹಗ್ಗ ತುಂಡಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರಿಗೆ ಈಜು ಬಾರದ ಕಾರಣ ಈ ಸಾವು ಸಂಭವಿಸಿದೆ ಎಂದು ಕೇಸು ದಾಖಲಿಸಿ ಕೊಂಡಿರುವ ಅಜೆಕಾರು ಪೊಲೀಸರು ತಿಳಿಸಿದ್ದಾರೆ.