ಮಲ್ಪೆ: ದಕ್ಕೆಯಿಂದ ಬಿದ್ದು ಮೃತ್ಯು

Update: 2018-01-19 17:41 GMT

ಮಲ್ಪೆ, ಜ.19: ಮಲ್ಪೆ ಮೀನುಗಾರಿಕಾ ಬಂದರಿನ ಹರಾಜು ಧಕ್ಕೆಯಲ್ಲಿ ನಿಲ್ಲಿಸಿದ ಬೋಟನಿಂದ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಬೋಟಿನಲ್ಲಿ ಕೆಲಸಮಾಡುವ ರಾಮು (24) ಎಂದು ಗುರುತಿಸಲಾಗಿದೆ. ಇವರು ಹೇಮಲತಾ ಕೋಟ್ಯಾನ್ ಎಂಬವರ ಮಾಲಕತ್ವದ ಮಹಾ ಬಲೇಶ್ವರ ಎಂಬ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದು, ಜ.17ರ ಅಪರಾಹ್ನ ಮೀನುಗಾರಿಕೆ ಮಾಡಿಕೊಂಡು ಬಂದವರು ದಕ್ಕೆಯಲ್ಲಿ ನಿಲ್ಲಿಸಿದ ಬೋಟಿನಲ್ಲಿ ಮೀನು ಖಾಲಿ ಮಾಡಿ ಉಳಿದುಕೊಂಡಿದ್ದರು.

ರಾಮು ಅವರು ಶಂಕರ್ ಎಂಬವರೊಂದಿಗೆ ರಾತ್ರಿ ಬೋಟಿನಲ್ಲಿ ಊಟ ಮಾಡಿ ಕೈತೊಳೆಯುವಾಗ ಅಕಸ್ಮಿಕವಾಗಿ ಕಾಲು ಜಾರಿ ದಕ್ಕೆಯ ನೀರಿಗೆ ಬಿದ್ದಿದ್ದು, ಗುರುವಾರ ಸಂಜೆ ವೇಳೆಗೆ ದಕ್ಕೆಯ ನೀರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News