ಜಾಲ್ಸೂರ್: ಪಯನೀರ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ

Update: 2018-01-19 17:48 GMT

ಸುಳ್ಯ, ಜ. 19: ಜಾಲ್ಸೂರಿನ ಪಯನೀರ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಹಾಗೂ ಸ್ಥಾಪಕರ ದಿನಾಚರಣೆಯು ಇತ್ತೀಚೆಗೆ ಜರುಗಿತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾದ ಡಾ. ರಘು ಅವರು ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ರಘು ಅವರು, ಈ ಒಂದು ಪ್ರದೇಶದಲ್ಲಿ ಎಲ್ಲಾ ಜಾತಿ, ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಆಡಳಿತ ಮಂಡಳಿಯ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು. ಸ್ಥಾಪಕಾಧ್ಯಕ್ಷ ರಝಾಕ್ ಅವರು ಮಾತನಾಡಿ, ಊರವರ ಹಾಗೂ ರಕ್ಷಕರ ಇದು ವರೆಗಿನ ಪ್ರಯತ್ನದಿಂದಾಗಿ ಈ ಶಾಲೆಯು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಮುಂದೆಯೂ ನಿಮ್ಮಲ್ಲರ ಸಹಕಾರವನ್ನು ಬಯಸುವುದಾಗಿ ಹೇಳಿದರು.

ಸಭೆಯಲ್ಲಿ ಜಾಲ್ಸೂರು ಪರಿಸರದ ಜನಪ್ರಿಯ ವೈದ್ಯರಾಗಿರುವ ಡಾ. ಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕರಾಟೆ ಪಟು ಮೋಹನ್ ಇವರಿಂದ ತರಬೇತುಗೊಂಡ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ಕೂಡಾ ನಡೆಯಿತು. ಶಾಲಾಡಳಿತಾಧಿಕಾರಿ ರಾಜಾರಾಮ ನೆಲ್ಲಿತ್ತಾಯರವರು ಪ್ರಾಸ್ತಾವಿಕವಾಗಿ ಮಾತನಾಡಿದರೆ, ಮುಖ್ಯೋಪಾದ್ಯಾಯಿನಿ ಆರತಿಯವರು ವಾರ್ಷಿಕ ವರದಿ ವಾಚಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿಯರಾದ ಶಬಾನಾ, ಸುಷ್ಮಿತಾ, ಸಂಧ್ಯಾ, ಜ್ಯೋತಿಲಕ್ಷ್ಮಿ, ಹಾಗೂ ಸುಧಾರಾಣಿಯವರು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ನಝೀರ್ ಮಠರವರು ಅತಿಥಿಗಳನ್ನು ಸ್ವಾಗತಿಸಿದರು. ಟ್ರಸ್ಟಿಗಳಾದ ದಾನಿಶ್ ಅಹ್ಮದ್ ವಂದಿಸಿದರೆ, ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು

 ಸಭೆಯಲ್ಲಿ ಸುಳ್ಯ ಪುರಸಭಾ ಸದಸ್ಯ ಹಾಗೂ ರಾಜ್ಯ ವಕ್ಫ್ ಸಮಿತಿ ಸದಸ್ಯರಾದ ಸಂಶುದ್ದೀನ್ ಎಸ್, ಶಾಲಾ ಸ್ಥಾಪಕಾಧ್ಯಕ್ಷ ಅಬ್ದುಲ್ ರಝಾಕ್ ಕೆ ಸಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಉಪಾಧ್ಯಕ್ಷ ಕೃಷ್ಣಪ್ಪ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ನಝೀರ್ ಮಠ, ಆಡಳಿತ ಮಂಡಳಿಯ ಟ್ರಸ್ಟಿಗಳಾದ ರನೀಶಾ, ಮೂನಿಶಾ, ದಾನಿಶ್ ಅಹ್ಮದ್, ಶಾಲಾ ಆಡಳಿತಾಧಿಕಾರಿ ರಾಜಾರಾಂ ನೆಲ್ಲಿತ್ತಾಯ ಹಾಗೂ ಮುಖ್ಯೋಪಾಧ್ಯಾಯಿನಿ ಆರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News