ಬಳ್ಳಾರಿಯಲ್ಲಿ ಸಚಿವ ಅನಂತ ಕುಮಾರ್ ಹೆಗಡೆಗೆ ಮುತ್ತಿಗೆ

Update: 2018-01-20 08:51 GMT

ಬಳ್ಳಾರಿ, ಜ.20: ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಗೆ ಇಂದು ಬಳ್ಳಾರಿಯಲ್ಲಿ ದಲಿತ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸಿ , ಅವರ ಕಾರಿಗೆ ಮುತ್ತಿಗೆ ಹಾಕಿದರು.

ಅನಂತಕುಮಾರ್ ಹೆಗಡೆ ಉದ್ಯೋಗ ಮೇಳ ಉದ್ಘಾಟನೆಗೆ ಬಳ್ಳಾರಿಯ ಐಬಿಯಿಂದ ಹೊರಡುತ್ತಿದ್ದಂತೆ ಅವರ ಕಾರಿಗೆ ಮುತ್ತಿಗೆ ಹಾಕಿ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.  ಸಂಸದ ಶ್ರೀರಾಮುಲು ಅವರು ಪ್ರತಿಭಟನೆಕಾರರನ್ನು ಸಮಾಧಾನಪಡಿಸಲು ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.

ಪೊಲೀಸರು ಬಳಿಕ ಮಧ್ಯಪ್ರವೇಶಿಸಿ  ಪ್ರತಿಭಟನಕಾರರನ್ನು ಚದುರಿಸಿ ಅನಂತ ಕುಮಾರ್ ಅವರನ್ನು ಸಮಾರಂಭದ ಸ್ಥಳಕ್ಕೆ ಕರೆದೊಯ್ದರು. ಸಮಾರಂಭದಲ್ಲಿ ಮತ್ತೆ ಸಚಿವ ಅನಂತ ಕುಮಾರ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿದರು.

“ನಮ್ಮಲ್ಲಿ ಛಲವಿದೆ. ದೇಶಕಟ್ಟುವ ಬಲವಿದೆ. ಯಾವುದೋ ನಾಯಿ ರಸ್ತೆಯಲ್ಲಿ ಕೂತು ಕೂಗಿದರೆ ಹೆದರುವ ಜನ ನಾವಲ್ಲ. ನನ್ನ ಸ್ವಭಾವವೇ ಹೀಗೆ . ಇದರಲ್ಲಿ ರಾಜಿಯಾಗುವ ಪ್ರಶ್ನೆ ಇಲ್ಲ " ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News