ಪ್ರಾಂಶುಪಾಲೆಯನ್ನು ಗುಂಡಿಕ್ಕಿ ಕೊಂದ 12ನೆ ತರಗತಿಯ ವಿದ್ಯಾರ್ಥಿ

Update: 2018-01-20 10:27 GMT
ಮೃತ ಪ್ರಾಂಶುಪಾಲೆ

ಹರ್ಯಾಣ, ಜ.20: ಇಲ್ಲಿನ ಖಾಸಗಿ ಶಾಲೆಯೊಂದರ 12ನೆ ತರಗತಿಯ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದ ಘಟನೆ ನಡೆದಿದ್ದು, ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ಪ್ರಾಂಶುಪಾಲರು ನಿಂದಿಸಿದ್ದರಿಂದ ಕೋಪಗೊಂಡ ವಾಣಿಜ್ಯ ವಿಭಾಗದ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಲೈಸೆನ್ಸ್ ಇರುವ ಬಂದೂಕಿನಿಂದ ಪ್ರಾಂಶುಪಾಲರಿಗೆ ಗುಂಡಿಕ್ಕಿದ್ದಾನೆ ಎನ್ನಲಾಗಿದೆ.

ಗುಂಡಿನ ದಾಳಿಗೊಳಗಾದ ಪ್ರಾಂಶುಪಾಲೆ ರೀತು ಚಾಬ್ರಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾಜರಾತಿ ಕಡಿಮೆ ಇದ್ದುದಕ್ಕಾಗಿ ಹಾಗು ಶಾಲೆಯಲ್ಲಿ ಆಗಾಗ ಹೊಡೆದಾಟ ನಡೆಸುತ್ತಿದ್ದುದಕ್ಕಾಗಿ ವಿದ್ಯಾರ್ಥಿಯನ್ನು ಹೊರಹಾಕಲಾಗಿತ್ತು. ಶನಿವಾರ ಬಂದೂಕಿನೊಂದಿಗೆ ಬಂದ ಆತ ಪ್ರಾಂಶುಪಾಲರಿಗೆ ಗುಂಡಿಕ್ಕಿದ್ದಾನೆ ಎನ್ನಲಾಗಿದೆ.

ಕೂಡಲೇ ಸ್ಥಳದಲ್ಲಿದ್ದ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News