ಬಂಟ್ವಾಳ: ಪಿಎಫ್ಐ ವತಿಯಿಂದ 'ಪಿರ್ಸತ್ತೊ ಉಮ್ಮ' ಕಾರ್ಯಕ್ರಮ

Update: 2018-01-21 12:34 GMT

ಬಂಟ್ವಾಳ, ಜ. 21: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಗ್ರಹಾರ ವಲಯದ ವತಿಯಿಂದ ಪಿರ್ಸತ್ತೊ ಉಮ್ಮ (ಪ್ರೀತಿಯ ತಾಯಿ) ಎಂಬ ಕಾರ್ಯಕ್ರಮ ಬಾಂಬಿಲ ಜಂಕ್ಷನ್‌ ನಲ್ಲಿ ನಡೆಯಿತು.

ಅಕ್ಬರ್ ಮುಸ್ಲಿಯಾರ್ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಮುಖ್ಯ ಭಾಷಣಗಾರ ಇಂಮ್ತಿಯಾಝ್ ತುಂಬೆ ತಾಯಿಯ ಸಂಪೂರ್ಣವಾದ ಮಹತ್ವವನ್ನು  ತಿಳಿಸಿದರು. ಮುಬಾರಕ್ ಜುಮಾ ಮಸೀದಿ ಬಾಂಬಿಲ ಇದರ ಅಧ್ಯಕ್ಷ ಬಾವ ಮುಸ್ಲಿಯಾರ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ,  ಸಮಾಜ ಸೇವಕರಾದ ಸರ್ಫುದ್ದೀನ್ ಗುಂಪಕಲ್ಲು ಅತಿಥಿ ‌ಭಾಷಣ ಮಾಡಿದರು.

ಪಿ.ಎಫ್.ಐ ಬಂಟ್ವಾಳ ಡಿವಿಷನ್ ಅಧ್ಯಕ್ಷ ರಹಿಮಾನ್ ಗೂಡಿನಬಳಿ, ಪಿ.ಎಫ್.ಐ ಮಡಂತ್ಯಾರ್ ಡಿವಿಷನ್ ಅಧ್ಯಕ್ಷ ಬಿ.ಎಂ.ರಝಾಕ್, ಪಿ.ಎಫ್.ಐ ಅಗ್ರಹಾರ ವಲಯಾಧ್ಯಕ್ಷ ಅಬೂಬಕರ್ ಮದ್ದ, ಪಿ.ಎಫ್.ಐ ಕಾವಳಕಟ್ಟೆ ವಲಯಾಧ್ಯಕ್ಷ ಹಾರಿಸ್ ಕಾವಳಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅನ್ವರ್ ಮದ್ದ ಕವನ ವಚಿಸಿದರು, ಉವೈಸಿ ಬಾಂಬಿಲ ಕಿರಾಹತ್ ಪಠಿಸಿದರು, ನಕಾಶ್ ಬಾಂಬಿಲ‌ ಸ್ವಾಗತಿಸಿದರು. ಅಝರ್ ಪಂಜೋಡಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News