ಜ.28ರಂದು ತುಳುಗೀತೆ ಗಾಯನ ಸ್ಪರ್ಧೆ

Update: 2018-01-21 16:41 GMT

ಉಡುಪಿ, ಜ.21: ಉಡುಪಿ ತುಳುಕೂಟದ ಆಶ್ರಯದಲ್ಲಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 23ನೇ ವರ್ಷದ ತುಳುಗೀತೆ ಗಾಯನ ಸ್ಪರ್ಧೆ ಜ.28ರಂದು ಬೆಳಗ್ಗೆ 9ಗಂಟೆಗೆ ಉಡುಪಿಯ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಒಂದನೇ ತರಗತಿಯಿಂದ 7ನೆ ತರಗತಿ ವರೆಗಿನ ವಿದ್ಯಾರ್ಥಿಗಳು ಕಿರಿಯ ವಿಭಾಗ, 8ನೆ ತರಗತಿಯಿಂದ 10ನೆ ತರಗತಿ ವರೆಗಿನ ವಿದ್ಯಾರ್ಥಿಗಳು ಹಿರಿಯ ವಿಭಾಗ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮು್ತ ವಿಭಾಗ ದಲ್ಲಿ ಸ್ಪರ್ಧಿಸಬಹುದಾಗಿದೆ.

ಆಸಕ್ತ ಸ್ಪರ್ಧಿಗಳು ತಮ್ಮ ಹೆಸರನ್ನು ಜ.25ರೊಳಗೆ ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ(ಮೊ-9448296658) ಅಥವಾ ಸ್ಫರ್ಧೆಯ ಸಂಚಾಲಕ ವಿವೇಕನಂದ ಎನ್.(ಮೊ-9449367595) ಇವರಲ್ಲಿ ನೋಂದಾಯಿಸಬಹುದು ಎಂದು ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News