ಕಳವು ಪ್ರಕರಣ: ಆರೋಪಿಗಳ ಬಂಧನ

Update: 2018-01-23 17:53 GMT

ಪಡುಬಿದ್ರೆ, ಜ. 23: ಮನೆ ಬಳಿ ನಿಲ್ಲಿಸಿದ ಬೈಕ್‌ನ ಬಿಡಿಭಾಗ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ನಿತೇಶ್ ಪೂಜಾರಿ (24), ಮುಳ್ಳಗುಡ್ಡೆ ಬಳಿಯ ನಿವಾಸಿ ಕಾರ್ತಿಕ (21), ಮನೋಜ್ (19) ಎಂದು ಗುರುತಿಸಲಾಗಿದೆ.

ಕಳೆದ ವಾರ ಎರ್ಮಳು ಕಲ್ಸಂಕ ಬಳಿಯ ನಿವಾಸಿ ಇರ್ಫಾನ್ ಎಂಬವರ ಬೈಕ್‌ನ ಬಿಡಿಭಾಗಗಳು ಹಾಗೂ ವಾಷಿಂಗ್ ಮೆಶಿನ್‌ ನನ್ನು ಕಳವುಗೈದಿದ್ದರು. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಅದರಲ್ಲಿ ಕಳವು ಕೃತ್ಯ ದಾಖಲಾಗಿತ್ತು. ಇದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳವಾರ ಬೆಳಗ್ಗೆ ಉಚ್ಚಿಲದಲ್ಲಿ ಮೂವರನ್ನು ಬಂಧಿಸಿದರು.

ಬಂಧಿತರಿಂದ ಕಳವುಗೈದ ಸೊತ್ತುಗಳು, ರಿಕ್ಷಾ ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ನಿತೇಶ್ ರಿಕ್ಷಾ ಚಾಲಕನಾ ಗಿದ್ದು, ಕಾರ್ತಿಕ ಮೀನುಗಾರಿಕಾ ವೃತ್ತಿ ಮಾಡಿಕೊಂಡಿದ್ದು, ಮನೋಜ್ ಐಟಿಐ ವಿದ್ಯಾರ್ಥಿಯಾಗಿದ್ದ. ಬಂಧಿತರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News