ಫೆ.2ರಂದು ಎಲ್ಲೂರಿನಲ್ಲಿ ಸ್ವಲಾತ್ ಮಜ್ಲಿಸ್
Update: 2018-01-31 20:46 IST
ಮಂಗಳೂರು, ಜ. 31: ಉಚ್ಚಿಲ ಸಮೀಪದ ಎಲ್ಲೂರಿನ ದಾರುಲ್ ಅಮಾನ್ ಎಜುಕೇಶನಲ್ ಅಕಾಡಮಿ ವತಿಯಿಂದ ಫೆ. 2ರಂದು ಮಧ್ಯಾಹ್ನ 3 ಗಂಟೆಗೆ ಎಲ್ಲೂರಿನಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಶಿಬಿರ ಕಾರ್ಯಕ್ರಮ ನಡೆಯಲಿವೆ.
ಕಾರ್ಯಕ್ರಮದ ನೇತೃತ್ವವನ್ನು ಅಕಾಡಮಿಯ ಮುಖ್ಯಸ್ಥ ಅಲ್ಹಾಜ್ ಸಲೀಂ ಮದನಿ ಕುತ್ತಾರು ವಹಿಸಲಿದ್ದಾರೆ. ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ ಮೂಳೂರು ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.