ಪೊಲೀಸರಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಕುಟುಂಬ
Update: 2018-02-04 12:11 GMT
ತಿರುವನಂತಪುರಂ,ಫೆ.4: ಪೊಲೀಸರಿಗೆ ಪತ್ರ ಬರೆದು ಮೂವರು ಸದಸ್ಯರ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದೆ. ತಿರುವನಂತಪುರಂ ಶಾಸ್ತಮಂಗಲಂ ಪಣಿಕ್ಕರ್ಸ್ ಲೈನ್ ಎಸ್-43 ವನಮಾಲಿಯ ನಿವೃತ್ತ ಪಿಡಬ್ಲ್ಯೂಡಿ ಅಧಿಕಾರಿ ಸುಕುಮಾರನ್ನಾಯರ್(65), ಪತ್ನಿ ಆನಂದವಲ್ಲಿ(60), ಪುತ್ರ ಸನತ್(40) ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಶನಿವಾರ ಸಂಜೆ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲಿದ್ದೇವೆ ಎಂದು ಪೊಲೀಸರಿಗೆ ಈ ಕುಟುಂಬ ಪತ್ರವನ್ನು ಬರೆದಿತ್ತು.
ಶನಿವಾರ ಪತ್ರ ಸಿಕ್ಕಿದ್ದು, ಸಂಜೆ ಏಳೂವರೆ ಗಂಟೆಗೆ ಪೊಲೀಸರು ಮನೆಗೆ ಬಂದು ನೋಡಿದಾಗ ಮನೆಯ ಕೋಣೆಯಲ್ಲಿ ಮೂವರು ನೇಣುಹಾಕಿಕೊಂಡಿರುವುದು ಕಂಡು ಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣವನ್ನು ಪತ್ರದಲ್ಲಿ ಬರೆದಿಲ್ಲ.