ಪೊಲೀಸರಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಕುಟುಂಬ

Update: 2018-02-04 12:11 GMT

ತಿರುವನಂತಪುರಂ,ಫೆ.4: ಪೊಲೀಸರಿಗೆ ಪತ್ರ ಬರೆದು ಮೂವರು ಸದಸ್ಯರ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದೆ. ತಿರುವನಂತಪುರಂ ಶಾಸ್ತಮಂಗಲಂ ಪಣಿಕ್ಕರ್ಸ್ ಲೈನ್ ಎಸ್-43 ವನಮಾಲಿಯ ನಿವೃತ್ತ ಪಿಡಬ್ಲ್ಯೂಡಿ ಅಧಿಕಾರಿ ಸುಕುಮಾರನ್ನಾಯರ್(65), ಪತ್ನಿ ಆನಂದವಲ್ಲಿ(60), ಪುತ್ರ ಸನತ್(40) ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಶನಿವಾರ ಸಂಜೆ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲಿದ್ದೇವೆ ಎಂದು ಪೊಲೀಸರಿಗೆ ಈ ಕುಟುಂಬ ಪತ್ರವನ್ನು ಬರೆದಿತ್ತು.

ಶನಿವಾರ ಪತ್ರ ಸಿಕ್ಕಿದ್ದು, ಸಂಜೆ ಏಳೂವರೆ ಗಂಟೆಗೆ ಪೊಲೀಸರು ಮನೆಗೆ ಬಂದು ನೋಡಿದಾಗ ಮನೆಯ ಕೋಣೆಯಲ್ಲಿ ಮೂವರು ನೇಣುಹಾಕಿಕೊಂಡಿರುವುದು ಕಂಡು ಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೆಡಿಕಲ್  ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣವನ್ನು ಪತ್ರದಲ್ಲಿ ಬರೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News