×
Ad

ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹ ಮುಳುಗಡೆ: ಜಮೀನಿನ ಸ್ಪಷ್ಟ ಚಿತ್ರಣ ನೀಡಲು ಡಿಸಿ ಸೂಚನೆ

Update: 2018-02-07 21:54 IST

ಬಂಟ್ವಾಳ, ಫೆ. 7: ತುಂಬೆ ಡ್ಯಾಂನಲ್ಲಿ ಜ.11ರಿಂದ ಪ್ರಾಯೋಗಿಕವಾಗಿ 6ಮೀ. ನೀರು ಸಂಗ್ರಹಿಸಿ ಮುಳುಗಡೆ ಜಮೀನಿನ ಸ್ಪಷ್ಟ ಚಿತ್ರಣ ನೀಡಿ, ಸೂಕ್ತ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಮನಪಾ ಆಯುಕ್ತರು, ಬಂಟ್ವಾಳ ತಹಶೀಲ್ದಾರ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರಿಗೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಲಿಖಿತವಾಗಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಂತ್ರಸ್ತ ರೈತರ ಸಭೆಯಲ್ಲಿ ಮನಪಾ ಆಯುಕ್ತರು ಪ್ರಸ್ತುತ ಪರಿಶೀಲನೆಗಾಗಿ ನೀರು ನಿಲುಗಡೆ ಮಾಡಿದ್ದು, ನಂತರ ಆದನ್ನೇ ಖಾಯಂ ಮಾಡಿ ರೈತರಿಗೆ ಅನ್ಯಾಯವಾಗಿರುವ ಬಗ್ಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಮಾಡಿತ್ತು.

ರೈತರಿಗೆ ಹೈಕೋರ್ಟ್ ಆದೇಶದಂತೆ ರೈತರ ಸಮಕ್ಷಮದಲ್ಲಿ ಸರ್ವೆ ಮಾಡುವ ಮೂಲಕ ಲಿಖಿತವಾಗಿ ಮಾಹಿತಿ ನೀಡಬೇಕು. ತಾರತಮ್ಯ ರಹಿತ ಏಕ ಗಂಟಿನ ನ್ಯಾಯೋಜಿತ ಸೂಕ್ತ ಪರಿಹಾರ ವಿತರಿಸುವ ಅಧಿಕಾರಿಗಳ, ಜನಪ್ರತಿನಿಧಿಗಳ ರೈತರ ಸಭೆ ನಡೆಸುವಂತೆ ಹಾಗೂ ರೈತರ ಹಿತಾಶಕ್ತಿ ಕಾಪಾಡು ವಂತೆ ಮನವಿಯಲ್ಲಿ ವಿನಂತಿಸಲಾಗಿತ್ತು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗೆ ಹಾಗೂ ಜಿ.ಪಂ.ಅಧ್ಯಕ್ಷರಿಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎಸ್.ಕೆ.ಇದಿನಬ್ಬ , ದ.ಕ.ಜಿಲ್ಲಾ ರೈತ ಸಂಘ ಹಸಿರು ಸೇನೆ ಕಾರ್ಯದರ್ಶಿ ಎನ್.ಮನೋಹರ ಶೆಟ್ಟಿ, ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ, ತಾಲೂಕು ಅಧ್ಯಕ್ಷ ಶರತ್ ಕುಮಾರ್ ತನ್ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News