ಕುತ್ಪಾಡಿ: ಮರದಿಂದ ಬಿದ್ದು ಮೃತ್ಯು
Update: 2018-02-08 22:17 IST
ಉಡುಪಿ, ಫೆ.8: ಇಲ್ಲಿಗೆ ಸಮೀಪದ ಕುತ್ಪಾಡಿ ಗ್ರಾಮದ ಅನಂತಕೃಷ್ಣ ನಗರದ ಸದಾಶಿವ ಆಚಾರ್ಯ (48) ಎಂಬವರು ತನ್ನ ಮನೆಯ ಸಮೀಪದ ಕುಮಾರ್ ಶೇರಿಗಾರ್ ಎಂಬವರ ಜಾಗದಲ್ಲಿರುವ ಹುಣಸೆಮರವನ್ನು ಬುಧವಾರ ಹತ್ತಿ ಹುಣಸೆಹುಳಿಯನ್ನು ಕೊಯ್ಯುತ್ತಿರುವಾಗ ಮರದ ರೆಂಬೆ ಮುರಿದು ಆಯತಪ್ಪಿ ಬಿದ್ದು ತಲೆಗೆ ತೀವ್ರತರದ ಗಾಯವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.