ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಟೂರಿಸ್ಟ್ ಟ್ಯಾಕ್ಸಿ : ಪ್ರೀಪೈಡ್ ಕೌಂಟರ್ ಆರಂಭಕ್ಕೆ ಅನುಮತಿ
ಉಡುಪಿ, ಫೆ.9: ಉಡುಪಿ ರೈಲ್ವೆ ನಿಲ್ದಾಣದಲ್ಲಿ ಟೂರಿಸ್ಟ್ ಟ್ಯಾಕ್ಸಿ ಪ್ರೀಪೈಡ್ ಕೌಂಟರ್ನ್ನು ಪ್ರಾರಂಭಿಸುವ ಬಗ್ಗೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆುಲ್ಲಿ ಅನುಮತಿಯನ್ನು ನೀಡಲಾಯಿತು.
ಸಭೆಯಲ್ಲಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್ ವರ್ಣೇಕರ್ ಒಟ್ಟು 13 ವಿಷಯಗಳ ಕಾರ್ಯಸೂಚಿಯನ್ನು ಮಂಡಿಸಿ ದರು. ಉಡುಪಿ ನಗರದ ಬ್ರಹ್ಮಗಿರಿ ವೃತ್ತದಲ್ಲಿ ವಾಹನ ನಿಲುಗಡೆಯನ್ನು ನಿಷೆೀಧಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕುಕ್ಕೆಹಳ್ಳಿ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿಯ ನಾಲ್ಕು ಶಾಲೆಗಳ ಬಳಿ ನಿಧಾನ ವಾಗಿ ಚಲಿಸಿ ಎಂಬ ಸೂಚನಾ ಪಲಕ ಅಳವಡಿಸಲು ಕೋರಿ ಬಂದಿದ್ದ ಮನವಿಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಸಂತೆಕಟ್ಟೆ ಕೆ.ಜಿ.ರೋಡ್ ಮಧ್ಯೆ ಬಸ್ ನಿಲುಗಡೆ ಕೋರಿ ಬಂದ ಮನವಿಯನ್ನು ರಸ್ತೆ ಕಾಮಗಾರಿ ಬಳಿಕ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಿಟ್ಟೂರು ಆಭರಣ ಮೋಟಾರ್ಸ್ ಶೋ ರೂಂ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಬಸ್ ನಿಲುಗಡೆಯನ್ನು ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಉಪ ನಿರೀಕ್ಷಕರು ಉಡುಪಿ ನಗರ ಪೊಲೀಸ್ ಠಾಣೆಯವರಿಂದ ಬಂದ ಮನವಿಗೆ ಸಬೆ ಸಮ್ಮತಿ ವ್ಯಕ್ತಪಡಿಸಲಾಯಿತು.
ಎಂಟಿಆರ್ ಹೋಟೇಲ್ ಬಳಿ ರಿಕ್ಷಾ ನಿಲ್ದಾಣ ಅನುಮತಿ ಕೋರಿದ ಅರ್ಜಿ ಕುರಿತು ಚರ್ಚೆ ನಡೆಸಿದ್ದು, ಅಲ್ಲಿ ಸಾಕಷ್ಟು ಜಾಗ ಇಲ್ಲದ ಕಾರಣ ರಿಕ್ಷಾ ನಿಲ್ದಾಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನಿರ್ಧರಿಸಲಾಯಿತು. ಎಂಜಿಎಂ ಕಾಲೇಜು ಕ್ರೀಡಾಂಗಣದ ಹತ್ತಿರ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ಹಾಸ್ಟೆಲ್ ಎದುರು ರಸ್ತೆಗೆ ಹಂಪ್ಸ್ ನಿರ್ಮಿಸಲು ಸಭೆಯಲ್ಲಿ ಸೂಚಿಸಲಾಯಿತು.
ಕುಕ್ಕಿಕಟ್ಟೆ ಡಯಾನಾ ಟಾಕೀಸ್ ಬಳಿ ಅಟೊ ನಿಲ್ದಾಣವನ್ನು ನಿರ್ಮಿಸಲು ಮಾಡಿಕೊಳ್ಳಲು ಅನುಮತಿ ಕೋರಿದ್ದು, ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ತಿಳಿಸಿತು. ಪರ್ಕಳ ರಿಕ್ಷಾ ನಿಲ್ದಾಣದ ಬಳಿ ಹೆಚ್ಚುವರಿ ನಿಲ್ದಾಣಕ್ಕೆ ಅನುಮತಿ ನೀಡಬೇಕಾಗಿ ಮನವಿ ಸಲ್ಲಿಸಿದ್ದು, ಅಲ್ಲಿ ಜಾಗವಿಲ್ಲದ ಕಾರಣ ಹೆಚ್ಚುವರಿ ನಿಲ್ದಾಣ ಅಸಾಧ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಅಂಬಾಗಿಲು ಮೀನು ಮಾರ್ಕೆಟ್ ಬಳಿ ಆಟೋ ನಿಲ್ದಾಣ ಅನುಮತಿ ಹಾಗೂ ಅಂಬಾಗಿಲು ಮೀನು ಮಾರ್ಕೆಟ್ ಹತ್ತಿರ ಆಟೋ ನಿಲ್ದಾಣವನ್ನು ತೆರವುಗೊಳಿ ಸಲು ಬಂದ ಮನವಿಯನ್ನು ಪರಿಶೀಲಿಸಲಾಯಿತು. ನಿಟ್ಟೆ ಗ್ರಾಮದ ಪರಪ್ಪಾಡಿ ಜಂಕ್ಷನ್ ಬಳಿ ರಾಜ್ಯ ಹೆದ್ದಾರಿಯಲ್ಲೇ ವೇಗ ತಡೆಯನ್ನು ಅಳವಡಿ ಸು ಕುರಿತು ಚರ್ಚೆ ನಡೆಸಲಾಯಿತು.
ತ್ರಾಸಿ ಬಳಿಯ ಮೊವಾಡಿ ಕ್ರಾಸ್ ಜಂಕ್ಷನ್ನಲ್ಲಿ ಖಾಸಗಿ ಬಸ್ಗಳ ನಿಲುಗಡೆ ಸೌಲಭ್ಯ ಕಲ್ಪಿಸುವ ಕುರಿತು ಮನವಿ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕೆಎಸ್ಆರ್ಟಿಸಿ ಮಂಗ ಳೂರು ವಿಬಾಗದ ನಿಯಂತ್ರಣಾಧಿಕಾರಿ ದೀಪಕ್ ರಾವ್, ಜೈಶಾಂತ್, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.