ಉತ್ತರ ಪ್ರದೇಶ: ಕ್ಷುಲ್ಲಕ ಕಾರಣಕ್ಕೆ ದಲಿತ ವಿದ್ಯಾರ್ಥಿಯನ್ನು ನಡುಬೀದಿಯಲ್ಲೇ ಥಳಿಸಿ ಕೊಂದರು

Update: 2018-02-11 14:06 GMT

ಅಲಹಾಬಾದ್, ಫೆ.11: ದಲಿತ ವಿದ್ಯಾರ್ಥಿಯೋರ್ವನ ಮೇಲೆ ಹಾಕಿ ಸ್ಟಿಕ್ ಗಳು, ಕಲ್ಲುಗಳಿಂದ ದಾಳಿ ನಡೆಸಿದ ಗುಂಪೊಂದು ನಡುಬೀದಿಯಲ್ಲೇ ಆತನನ್ನು ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ಇದರ ಆಧಾರದಲ್ಲಿ ವಿಜಯ್ ಶಂಕರ್ ಎಂಬಾತ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಯಾರೊಬ್ಬರನ್ನೂ ಪೊಲೀಸರು ಬಂಧಿಸಿಲ್ಲ. “ಸಿಸಿಟಿವಿ ಫೂಟೇಜ್ ಗಳ ಮೂಲಕ ನಮಗೆ ದುಷ್ಕರ್ಮಿಗಳನ್ನು ನೋಡಲು ಸಾಧ್ಯವಾಗಿದೆ. ಆದರೆ ಪ್ರಮುಖ ಆರೋಪಿ ವಿಜಯ್ ಶಂಕರ್ ನನ್ನು ಹೊರತುಪಡಿಸಿ ಉಳಿಸವರ ಗುರುತುಪತ್ತೆಯಾಗಿಲ್ಲ” ಎಂದು ಪೊಲೀಸ್ ಅಧಿಕಾರಿ ಸುಕೃತಿ ಮಾಧವ್ ಮಾಹಿತಿ ನೀಡಿದ್ದಾರೆ.

ಅಲಹಾಬಾದ್ ಡಿಗ್ರಿ ಕಾಲೇಜಿನ ಕಾನೂನು ವಿದ್ಯಾರ್ಥಿ ದಿಲೀಪ್ ಸರೋಜ್ ಮೃತಪಟ್ಟವರು. ದಿಲೀಪ್ ಸಹೋದರನ ದೂರಿನ ಆಧಾರದಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ದಿಲೀಪ್ ಹಾಗು ಆತನ ಗೆಳೆಯರು ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದರು. ಅಲ್ಲಿ ದುಷ್ಕರ್ಮಿಗಳ ಜೊತೆ ಮಾತಿಕ ಚಕಮಕಿ ನಡೆದಿತ್ತು. ಇದೇ ವಿಚಾರವಾಗಿ ಕೊಲೆ ನಡೆದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News