ಉಡುಪಿ; ರಸ್ತೆ ಅಪಘಾತಕ್ಕೆ ಮಹಿಳೆ ಬಲಿ
Update: 2018-02-11 22:29 IST
ಉಡುಪಿ, ಫೆ.11: ಲಾರಿಯೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿಯಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಫೆ.10ರಂದು ಸಂಜೆ 7.15ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಅಂಬಾಗಿಲು ಜಂಕ್ಷನ್ನಲ್ಲಿ ನಡೆದಿದೆ.
ಮೃತರನ್ನು ಕೆಳಾರ್ಕಳಬೆಟ್ಟುವಿನ ವಾಸು ನಾಯ್ಕ ಎಂಬವರ ಪತ್ನಿ ಶಕುಂತಳಾ (47) ಎಂದು ಗುರುತಿಸಲಾಗಿದೆ. ಅವರು ತನ್ನ ಮಗ ಶರತ್(22) ಎಂಬವರ ಬೈಕಿನಲ್ಲಿ ಕಾಪುವಿನಿಂದ ಸಂತೆಕಟ್ಟೆಗೆ ಬರುತ್ತಿದ್ದಾಗ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶಕುಂತಳಾ ಮೃತಪಟ್ಟರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.