ಜುಗಾರಿ: ಆರೋಪಿಗಳು ಸೆರೆ; ನಗದು ವಶ
Update: 2018-02-11 22:35 IST
ಮಲ್ಪೆ, ಫೆ.11: ಕೊಡವೂರು ಗ್ರಾಮದ ಮಧ್ವ ನಗರದ ಜವನರಕಟ್ಟೆ ಎಂಬಲ್ಲಿ ಫೆ.10ರಂದು ರಾತ್ರಿ 11.30ರ ಸುಮಾರಿಗೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಅವಿನಾಶ್ ಪೂಜಾರಿ, ಗಣೇಶ್ ಶೆಟ್ಟಿ, ಸಾಗರ್, ಮಣಿ ಕಂಠ, ರಮೇಶ್ ಕುಮಾರ್ ಎಂಬವರನ್ನು ಡಿಸಿಐಬಿ ಪೊಲೀಸರು ಬಂಧಿಸಿ, 4450 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.