ಮಡಿಕಲ್ಲು: ಸಮುದ್ರದಲ್ಲಿ ಮುಳುಗಿ ಯುವಕ ಮೃತ್ಯು

Update: 2018-02-11 17:10 GMT

ಬೈಂದೂರು, ಫೆ.11: ಉಪ್ಪುಂದ ಗ್ರಾಮದ ಮಡಿಕಲ್ಲು ಎಂಬಲ್ಲಿ ಫೆ.10 ರಂದು ಸಂಜೆ ವೇಳೆ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತ ಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಹಾಸನ ಜಿಲ್ಲೆಯ ಕೆ.ಎಂ.ದೇವರಾಜ್ ಎಂಬವರ ಪುತ್ರ ಭಾಗ್ಯರಾಜ್(21) ಎಂದು ಗುರುತಿಲಾಗಿದೆ. ಬಾಗಲಕೋಟೆ ಬೇಕರಿಯಲ್ಲಿ ಕೆಲಸ ಮಾಡಿ ಕೊಂಡಿದ್ದ ಈತ ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜು ಹೋಗಿದ್ದನು. ಈತ ಸಾವಿಗೆ ಆತನ ಜೊತೆ ಸಮುದ್ರದಲ್ಲಿ ಈಜಾಡಲು ಹೋದ ಸ್ನೇಹಿತರ ಮೇಲೆ ಅನುಮಾನವಿರುವುದಾಗಿ ಪೋಷಕರು ದೂರಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News