ಇಂಡೊನೇಶ್ಯ: ಬಸ್ ದುರಂತಕ್ಕೆ 27 ಬಲಿ

Update: 2018-02-11 18:04 GMT

ಜಕಾರ್ತ,ಫೆ.11: ಇಂಡೊನೇಶ್ಯದ ಮುಖ್ಯದ್ವೀಪವಾದ ಜಕಾರ್ತದಲ್ಲಿ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಬಸ್ಸೊಂದು ಮೋಟಾರ್‌ಬೈಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿಗರಿಂದ ತುಂಬಿದ್ದ ಈ ಬಸ್ ಜಕಾರ್ತದ ಉಪನಗರವಾದ ತಾಂಗೆರಾಂಗ್‌ಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಸಿದ್ಧ ಪರ್ವತಧಾಮವಾದ ತಾಂಗ್‌ಕುಬಾನ್ ಪೆರಾಹುವಿನಿಂದ ವಾಪಾಸಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News