ಮಾನವ ಕಳ್ಳ ಸಾಗಾಟ ಜಾಲದಿಂದ 7 ಮಕ್ಕಳ ರಕ್ಷಣೆ

Update: 2018-02-14 15:05 GMT

ಮಹಾರಾಜ್‌ಗಂಜ್, ಫೆ. 14: ಶಶಸ್ತ್ರ ಸೀಮಾ ಬಲದ ತಂಡ ಮಹಾರಾಜ್‌ಗಂಜ್‌ನಲ್ಲಿ ಮಾನವ ಸಾಗಣಿಕೆಯ ಜಾಲವೊಂದನ್ನು ಭೇದಿಸಿದ್ದು, ನೇಪಾಳದ 7 ಮಕ್ಕಳನ್ನು ರಕ್ಷಿಸಿದೆ ಹಾಗೂ ಆರೋಪಿಯನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಶಸಸ್ತ್ರ ಸೀಮಾ ಬಲ ಭಾರತ-ಪಾಕ್ ಗಡಿಯಲ್ಲಿರುವ ಸೋನೌಲಿಗೆ ಕರೆದೊಯ್ಯುತ್ತಿದ್ದ ಮಕ್ಕಳನ್ನು ರಕ್ಷಿಸಿದೆ ಹಾಗೂ ನೇಪಾಲದ ರೂಪೇಂದೇಹಿಯ ಮಾಘು ಕುಮಾರ್‌ನನ್ನು ಬಂಧಿಸಿದೆ ಎಂದು ಶಸಸ್ತ್ರ ಸೀಮಾ ಬಲದ ಉಪ ಕಮಾಂಡೆಂಟ್ ದಿಲೀಪ್ ಜಾ ತಿಳಿಸಿದ್ದಾರೆ.

ನಾನು ಹಾಗೂ ನನ್ನ ಸಹವರ್ತಿ ಈಗಾಗಲೇ 25 ಮಕ್ಕಳನ್ನು ವಿವಿಧ ದೇಶಗಳಿಗೆ ರವಾನಿಸಿದ್ದೇವೆ. ಇನ್ನೂ 10 ಮಕ್ಕಳನ್ನು ರವಾನಿಸಲು ಸಿದ್ಧತೆ ನಡೆಸುತ್ತಿದ್ದೆವು ಎಂದು ಮಾಘು ಕುಮಾರ್ ತಿಳಿಸಿದ್ದಾನೆ. ಒಂದು ವೇಳೆ ತಾನು ರಾಜಸ್ಥಾನದಲ್ಲಿರುವ ತನ್ನ ಸಹವರ್ತಿಗೆ ಈ ಮಕ್ಕಳನ್ನು ಹಸ್ತಾಂತರಿಸಿದ್ದರೆ, ಪ್ರತಿ ಮಕ್ಕಳಿಗೆ 500 ರೂ. ಸಿಗುತ್ತಿತ್ತು ಎಂದು ವಿಚಾರಣೆ ವೇಳೆ ಆತ ತಿಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News