ಉಡುಪಿ: ರಾಜ್ಯ ಬಜೆಟ್ಗೆ ಕೆಲವು ಪ್ರತಿಕ್ರಿಯೆಗಳು
ಗೊತ್ತು-ಗುರಿ ಇಲ್ಲದ ಕಳಪೆ ಬಜೆಟ್: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2018-19ನೇ ಸಾಲಿನ ರಾಜ್ಯ ಬಜೆಟ್ ಗೊತ್ತು ಗುರಿ ಇಲ್ಲದ ಅತ್ಯಂತ ಕಳಪೆ ಬಜೆಟ್. ಭಾರೀ ನಿರೀಕ್ಷೆಯನ್ನಿರಿಸಿದ ರೈತರ ಸಾಲ ಮನ್ನಾ ಮಾಡಿಲ್ಲ. ಮೀನುಗಾರಿಕೆಗೆ ಯಾವುದೇ ಹೊಸ ಸವಲತ್ತು ನೀಡಿಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಕಡೆಗಣಿನೆ. ಒಟ್ಟಿನಲ್ಲಿ ಜನರ ನಿರೀಕ್ಷೆಯನ್ನು ಮುಟ್ಟುವಲ್ಲಿ ಸಿದ್ದರಾಮಯ್ಯ ವಿಫಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಲ್ಲಿ ಹೊಸ ಬಜೆಟ್ ಮಂಡನೆ ಅನಿವಾರ್ಯ.
-ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಉಡುಪಿ.
ಆಶಾದಾಯಕ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲದ ಬಜೆಟ್ನಲ್ಲಿ ಸರ್ವರ ಹಿತಾಸಕ್ತಿ ಕಾಪಾಡುವಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದಾರೆ. ಆದರಲ್ಲೂ ವಿಶೇಷವಾಗಿ ರೈತರ ಸಾಲಮನ್ನಾ, ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ, ಮೀನುಗಾರಿಕೆಗೆ 337 ಕೋಟಿ ರೂ ಮೀಸಲು, ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ 495 ಕೋಟಿ ರೂ. ನೀಡುವ ಮೂಲಕ ಕರಾವಳಿಯಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಕರಾವಳಿಯಲ್ಲಿ ಇನ್ನೂ ಹೆಚ್ಚಿನ ಉದ್ಯೋಗಸೃಷ್ಠಿಗೆ ಸಹಾಯವಾಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಸಲದ ಬಜೆಟ್ನಲ್ಲಿ ಸರ್ವರ ಹಿತಾಸಕ್ತಿ ಕಾಪಾಡುವಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದಾರೆ. ಆದರಲ್ಲೂ ವಿಶೇಷವಾಗಿ ರೈತರ ಸಾಲಮನ್ನಾ, ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ, ಮೀನುಗಾರಿಕೆಗೆ 337 ಕೋಟಿ ರೂ ಮೀಸಲು, ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ 495 ಕೋಟಿ ರೂ. ನೀಡುವ ಮೂಲಕ ಕರಾವಳಿಯಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಕರಾವಳಿಯಲ್ಲಿ ಇನ್ನೂ ಹೆಚ್ಚಿನ ಉದ್ಯೋಗಸೃಷ್ಠಿಗೆ ಸಹಾಯವಾಗಲಿದೆ.
-ಸತೀಶ್ ಅಮೀನ್ ಪಡುಕೆರೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಅಭಿವೃದ್ಧಿಪರ ಬಜೆಟ್
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹೆಚ್ಚಿನ ಆದ್ಯತೆ, ಗ್ರಾಮೀಣಾಭಿವೃದ್ಧಿ ಯೋಜನೆಗೆ ಒತ್ತು ನೀಡುವುದರೊಂದಿಗೆ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ, ಹಳ್ಳಿಗಳ ಅಭಿವೃದ್ಧಿಯೊಂದಿಗೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ, ಮಧ್ಯಮ ವರ್ಗದ ಜನತೆಗೆ ಸೌಲಭ್ಯ, ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ, ವಿಮಾನ ದರ ಇಳಿಕೆ, ಕೈಗಾರಿಕಾ ಆಸ್ತಿ ತೆರಿಗೆ ಮನ್ನಾ, ಮಾರಾಟ ತೆರಿಗೆ ಇಳಿಕೆ, ಇ-ಆಡಳಿತಕ್ಕೆ ಆದ್ಯತೆ, ರೈತರಿಗೆ ಬಂಪರ್ ಕೊಡುಗೆ. ಎಲ್ಲಾ ವರ್ಗಗಳಿಗೂ ಸ್ಪಂದಿಸಿದ ಬಜೆಟ್ ಇದಾಗಿದೆ.
-ಭಾಸ್ಕರ್ ರಾವ್ ಕಿದಿಯೂರು, ಕಾಂಗ್ರೆಸ್ ವಕ್ತಾರ ಉಡುಪಿ
ಜನಪರ ಬಜೆಟ್
ಕೃಷಿ ಮೂಲಭೂತ ಸೌಕರ್ಯ, ಮಹಿಳಾ ಅಭಿವೃದ್ದಿ, ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮಹಿಳೆಯರ ಸುರಕ್ಷತೆ, ಪತ್ರಕರ್ತರ ಹಿತರಕ್ಷಣೆ, ಶಾಲೆಗಳ ನವೀಕರಣ, ಪ್ರವಾಸೋದ್ಯಮಕ್ಕೆ ಉತ್ತೇಜನ, ಸಾಲಮನ್ನಾ, ಹೊಸ ಸ್ಟಾರ್ಟ್ಅಪ್ ನೀತಿ, ಮೇವು ಭದ್ರತೆ ಮೂಲಕ ರಾಜ್ಯದ ಸಮಸ್ತ ಜನತೆಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಿದ ಜನಪರ ಬಜೆಟ್.
-ರಮೇಶ್ ಕಾಂಚನ್, ಉಡುಪಿ ನಗರಸಭಾ ಸದಸ್ಯ.
ಸರ್ವ ಜನ ಸುಖಿನೋ ಭವಂತು
ಕರ್ನಾಟಕದ ಸಮಸ್ತ ಜನತೆಗೆ ಜನಪರ ಬಜೆಟ್ ನೀಡುವ ಮೂಲಕ ಮುಖ್ಯಮಂತ್ರಿಗಳು ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಿ ದ್ದಾರೆ. ರೈತರ ಒಂದು ಲಕ್ಷದವರೆಗಿನ ಸಾಲ ಮನ್ನ, ಶೇ.3ರ ಬಡ್ಡಿದರದಲ್ಲಿ 10 ಲಕ್ಷ ರೂ. ಸಾಲ ಬಿಡುಗಡೆ ಘೋಷಣೆ ಮೂಲಕ ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದಾರೆ. ಸಣ್ಣ ನೀರಾವರಿ, ಮೀನುಗಾರಿಕೆ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಜಲಸಂಪನ್ಮೂಲ, ಪ್ರವಾಸೋದ್ಯಮ ಮೊದಲಾದ ಇಲಾಖೆಗಳಿಗೆ ಹೆಚ್ಚಿನ ಅನುದಾನ ಕಾದಿರಿಸಿ, ಮಹಿಳೆಯರಿಗೆ ಆದರಲ್ಲೂ ಉದ್ಯೋಗಸ್ಥ ಮಹಿಳೆಯರ ಸುರಕ್ಷತೆ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸಿರುವುದು ಸಂತಸ ತಂದಿದೆ.
-ಜನಾರ್ದನ ಭಂಡಾರ್ಕರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ.
ಕೃಷಿ, ಕೃಷಿಕರಿಗೆ ಆದ್ಯತೆ
ಕಾಫಿ ಬೆಳೆಗಾರರ ಹತ್ತು ಎಕರೆವರೆಗಿನ ಅನಧಿಕೃತ ಸಾಗುವಳಿಯನ್ನು ಭೋಗ್ಯದ ಮೇಲೆ ನೀಡುವ ನಿರ್ಧಾರ ಪ್ರಶಂಸಾರ್ಹ. ನಂಜುಂಡಸ್ವಾಮಿ ಹೆಸರಿನಲ್ಲಿ ಜಿ.ಕೆ.ವಿ.ಕೆಯಲ್ಲಿ ಕೃಷಿ ಸಂಶೋಧನೆ ಕೇಂದ್ರ ಸ್ಥಾಪನೆಗೆ 11 ಕೋಟಿ ನಿಗದಿ, ರೈತರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ,ಆಲೂಗಡ್ಡೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್, ಆರೋಗ್ಯ ಕರ್ನಾಟಕ ಪ್ರಾರಂಭ, ಪಶುಭಾಗ್ಯಕ್ಕೆ 59,167 ಫಲಾನುಭವಿಗಳು, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್, ಪತ್ರಕರ್ತ ರಿಗೆ 5 ಲಕ್ಷ ರೂ. ವಿಮೆ, ಮನೆಮನೆಗೆ ಪತ್ರಿಕೆ ಹಂಚವವರ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಎಲ್ಲವೂ ಬಜೆಟ್ನ ಉತ್ತಮ ಅಂಶಗಳು.
-ಸಚಿನ್ ಮೀಗಾ, ರಾಜ್ಯ ಅಧ್ಯಕ್ಷರು ಕೆಪಿಸಿಸಿ ಕಿಸಾನ್ ವಿಭಾಗ.
ಚುನಾವಣಾ ಪೂರ್ವ ಗಿಮಿಕ್ ಬಜೆಟ್
ರೈತರ ಸಂಪೂರ್ಣ ಸಾಲ ಮನ್ನಾ ಇಲ್ಲ, ಕರಾವಳಿ ಜಿಲ್ಲೆಗಳಿಗೆ ಯಾವುದೇ ಪ್ರಯೋಜನ ಇಲ್ಲ, ಮುಂಬರುವ ಸರಕಾರ ಇನ್ನೊಂದು ಬಜೆಟ್ ಅನ್ನು ಮಂಡಿಸುತ್ತದೆ. ಈ ಬಜೆಟ್ಗೆ ಯಾವುದೇ ಕಿಮ್ಮಕ್ಕು ಇಲ್ಲ. ಒಟ್ಟಾರೆ ಚುನಾವಣಾ ಪೂರ್ವ ಗಿಮಿಕ್ ಬಜೆಟ್ ಇದು.
ರೈತರ ಸಂಪೂರ್ಣ ಸಾಲ ಮನ್ನಾ ಇಲ್ಲ, ಕರಾವಳಿ ಜಿಲ್ಲೆಗಳಿಗೆ ಯಾವುದೇ ಪ್ರಯೋಜನ ಇಲ್ಲ, ಮುಂಬರುವ ಸರಕಾರ ಇನ್ನೊಂದು ಬಜೆಟ್ ಅನ್ನು ಮಂಡಿಸುತ್ತದೆ. ಈ ಬಜೆಟ್ಗೆ ಯಾವುದೇ ಕಿಮ್ಮಕ್ಕು ಇಲ್ಲ. ಒಟ್ಟಾರೆ ಚುನಾವಣಾ ಪೂರ್ವ ಗಿಮಿಕ್ ಬಜೆಟ್ ಇದು.
-ಯೋಗೀಶ್ ವಿ. ಶೆಟ್ಟಿ, ಜಿಲ್ಲಾಧ್ಯಕ್ಷರು ಜೆಡಿಎಸ್ ಉಡುಪಿ.
ಕಾರ್ಮಿಕರ ನಿರೀಕ್ಷೆ ಹುಸಿಗೊಳಿಸಿದ ಬಜೆಟ್
ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್, ಸಾಮಾನ್ಯ ಜನರ ಹಾಗೂ ದುಡಿಯುವ ವರ್ಗದ ಬೇಡಿಕೆಗಳಿಗೆ ಗೌರವ ಹಾಗೂ ಮಾನ್ಯತೆ ನೀಡದ ಖಂಡನಾರ್ಹ ಬಜೆಟ್. ಬಸವಣ್ಣ ವಚನದೊಂದಿಗೆ ಪ್ರಾರಂಭವಾದ ಈ ಬಜೆಟ್ ಕೇವಲ ವೈರಾಗ್ಯವನ್ನು ಪ್ರದರ್ಶಿಸಿ ಕಾಯಕ ಜೀವಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ.
-ವರಲಕ್ಷ್ಮಿ ಎಸ್., ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ