ಕೋಟ: ಶಸ್ತ್ರಚಿಕಿತ್ಸೆಗೆ ಹೆದರಿ ಮಹಿಳೆ ಆತ್ಮಹತ್ಯೆ

Update: 2018-02-17 17:02 GMT

ಕೋಟ, ಫೆ.17: ಮೂಲವ್ಯಾದಿ ಕಾಯಿಲೆಯಿಂದ ಬಳಲುತ್ತಿದ್ದ ಕೋಟತಟ್ಟು ಗ್ರಾಮದ ಕೃಷ್ಣ ಆಚಾರ್ ಎಂಬವರ ಪತ್ನಿ ಲಕ್ಷ್ಮೀ (35) ಎಂಬವರು ಶಸ್ತ್ರಚಿಕಿತ್ಸೆಗೆ  ಹೆದರಿ ಶುಕ್ರವಾರ ಸಂಜೆಯ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News