​ಎಸ್ಸೆಸ್ಸೆಫ್ ದ.ಕ ಜಿಲ್ಲಾ ವಾರ್ಷಿಕ ಕೌನ್ಸಿಲ್

Update: 2018-02-18 13:24 GMT

ಬಂಟ್ವಾಳ,ಫೆ.18:ಎಸ್ಸೆಸ್ಸೆಫ್ ದ.ಕ ಜಿಲ್ಲಾ ವಾರ್ಷಿಕ ಕೌನ್ಸಿಲ್ ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನರವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡ್ ಪದ್ಮಾ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷರಾದ ಅಶ್ರಫ್ ರಝಾ ಅಂಜದಿ ಕೌನ್ಸಿಲ್ ನ್ನು ಉದ್ಘಾಟಿಸಿದರು.ಕಾರ್ಯದರ್ಶಿಯವರ ವರದಿ ಹಾಗೂ ಕೊಶಾಧಿಕಾರಿಯ ಲೆಕ್ಕಪತ್ರದ ಮಂಡನೆ ಬಳಿಕ ಜಿಲ್ಲಾಧ್ಯಕ್ಷರು ತರಗತಿಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕ ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಉಪಾಧ್ಯಕ್ಷರುಗಳಾದ ಶರೀಫ್ ಸ ಅದಿ ಕಿಲ್ಲೂರು,ಇಬ್ರಾಯಿಂ ಸಖಾಫಿ ಸೆರ್ಕಳ,ಕೆ.ಎಂ.ಎಚ್ ಝುಹ್ರಿ ಕೊಂಬಾಳಿ, ಕಾರ್ಯದರ್ಶಿಗಳಾದ ಶರೀಫ್ ನಂದಾವರ, ಮಹಮ್ಮದ್ ಅಲಿ ತುರ್ಕಳಿಕೆ, ಸಲೀಂ ಹಾಜಿ ಬೈರಿಕಟ್ಟೆ, ಜಿಲ್ಲಾ ನಾಯಕರುಗಳಾದ ಶರೀಫ್ ಸಖಾಫಿ ಕುಪ್ಪೆಟ್ಟಿ, ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ, ಖಾಸಿಂ ಮುಸ್ಲಿಯಾರ್ ಬೆಳ್ತಂಗಡಿ, ಮುನೀರ್ ಸಖಾಫಿ ಉಳ್ಳಾಲ, ಹಾಫಿಳ್ ಮಜೀದ್ ಫಾಳಿಲಿ ಗಾಣೆಮಾರ್, ಮುತ್ತಲಿಬ್ ವೇಣೂರು, ರಶೀದ್ ಹಾಜಿ ವಗ್ಗ, ರಫೀಕ್ ಸುರತ್ಕಲ್, ಜಬ್ಬಾರ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News