ಅಪಘಾತ: ರೈಲ್ವೆ ಅಧಿಕಾರಿಗೆ ಗಾಯ

Update: 2018-02-18 17:26 GMT

ಶಿರ್ವ, ಫೆ.18: ಬೆಳಪು ಗ್ರಾಮದ ಮಧುರಾ ಸ್ಟೋರ್ ಬಳಿ ಫೆ.17ರಂದು ಮಧ್ಯಾಹ್ನ ವೇಳೆ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಕೊಂಕಣ ರೈಲ್ವೆಯ ಜೂನಿಯರ್ ಇಂಜಿನಿಯರ್ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಗಾಯಗೊಂಡವರನ್ನು ಬೈಕ್ ಸವಾರ ಕೊಂಕಣ್ ರೈಲ್ವೆಯ ಜೂನಿಯರ್ ಇಂಜಿನಿಯರ್ ಮೂಡಬಿದ್ರೆ ಒಂಟಿಕಟ್ಟೆಯ ಮನೀಶ್ ಶೆಟ್ಟಿ(32) ಹಾಗೂ ಹಿಂಬದಿ ಸವಾರ ಎಎಸ್‌ಟಿಇ ಅಧಿಕಾರಿ ಸಾಗರ್ ಗೋಟ್ನಿ ಎಂದು ಗುರುತಿಸ ಲಾಗಿದೆ. ಇವರು ಪಣಿಯೂರು ರೈಲ್ವೆ ನಿಲ್ದಾಣದ ಬಳಿ ಸಿಗ್ನಲ್ ಪರಿಶೀಲನೆ ನಡೆಸಿ ಇಲಾಖೆಯ ಬೈಕಿನಲ್ಲಿ ಪಕೀರ್ಣಕಟ್ಟೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಇಬ್ಬರು ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News