ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ಇಬ್ಬರು ಆಸ್ಪತ್ರೆಗೆ ದಾಖಲು

Update: 2018-02-19 16:11 GMT

ಮಂಗಳೂರು, ಫೆ. 19: ಬೋಂದೇಲ್‌ನ ಎಂಜಿಸಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಮೇಲೆ ಅದೇ ಕಾಲೇಜಿನ ಇತರ ಕೆಲವು ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮರವೂರಿನ ನಿವಾಸಿ ಮುಸ್ತಫಾ (17), ಕರಂಬಾರಿನ ಹಕೀಂ (17) ಮತ್ತು ಕರಂಬಾರಿನ ಮಸೂದ್ ಹಲ್ಲೆಗೊಳಗಾದ ವಿದ್ಯಾರ್ಥಿಗಳು. ಇವರಲ್ಲಿ ಮುಸ್ತಫಾ ಮತ್ತು ಹಕೀಂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಕುಡಿತದ ಅಮಲಿನಲ್ಲಿರುತ್ತಾರೆ. ಅಲ್ಲದೆ, ಸಿಗರೇಟ್‌ಗಳನ್ನು ತರುತ್ತಿದ್ದಾರೆ ಎಂದು ಆರೋಪಿಸಿ ಇತರ ವಿದ್ಯಾರ್ಥಿಗಳು ಈ ಹಿಂದೆ ದೂರು ನೀಡಿದ್ದರು. ಇದೇ ದ್ವೇಷದಿಂದ ನಾವೇ ದೂರು ನೀಡಿದ್ದೇವೆ ಎಂದು ಅನುಮಾನಿಸಿ ನಮ್ಮ ಮೇಲೆ ಸುಮಾರು 10 ಮಂದಿಯ ವಿದ್ಯಾರ್ಥಿಗಳು ಹೊರಗಿನವರ ಜೊತೆಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News