ಜುಗಾರಿ ಆಡುತ್ತಿದ್ದ 12 ಮಂದಿಯ ಬಂಧನ

Update: 2018-02-19 16:37 GMT

ಉಡುಪಿ, ಫೆ.19: ಕರಾವಳಿ ಬೈಪಾಸ್ ಬಳಿಯ ಹೊಟೇಲ್ ಶಾರದಾ ಇಂಟರ್‌ನ್ಯಾಶನಲ್ ಹಿಂಭಾಗ ಫೆ.18ರಂದು ಸಂಜೆ 6ಗಂಟೆ ಸುಮಾರಿಗೆ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕುತ್ಯಾರಿನ ಅಝರುದ್ದಿನ್ (30), ಬಾಗಲಕೋಟೆಯ ಲಕ್ಷ್ಮಣ(32), ಹೂಜೆಯ ಶೇಖ್ ಮುಹಮ್ಮದ್ ಸಕ್ಲೇನ್(19), ಅರಾಟೆಯ ಚಂದ್ರ ದೇವಾಡಿಗ(39) ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, 7,430ರೂ. ನಗದು ವಶಪಡಿಸಿಕೊಂಡಿದ್ದಾರೆ.

ಕಾರ್ಕಳ: ಯರ್ಲಪ್ಪಾಡಿ ಗ್ರಾಮದ ಚಿಕ್ಕಲ್ಬೆಟ್ಟು ಕೂಪು ಎಂಬಲ್ಲಿ ಫೆ.18 ರಂದು ಸಂಜೆ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮಣಿಕಂಠ, ಅಬ್ದುಲ್ ರಹಿಮಾನ್, ಸುರೇಶ, ರಾಮ, ಈರಪ್ಪಶಾಂತಪ್ಪ, ಮಂಜೇಶ, ಅಬ್ದುಲ್ ಖಾದರ್, ಮಹಾಂತೇಶ್ ಎಂಬುವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ, 2920ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News