ವಿಧಾನಸಭಾ ಚುನಾವಣೆ: ನೋಡಲ್ ಅಧಿಕಾರಿಗಳ ನೇಮಕ

Update: 2018-02-19 17:52 GMT

ಮಂಗಳೂರು, ಫೆ. 19: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಚುನಾವಣಾ ಕಾರ್ಯಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಮಾದರಿ ನೀತಿ ಸಂಹಿತೆ - ಪ್ರಸನ್ನ, ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ. ಚುನಾವಣಾ ವೆಚ್ಚ ಮೇಲ್ವಿಚಾರಣೆ- ಡಾ. ಕರಿಕಲನ್ ಉಪ ಅರಣ್ಯ ಸಂರಕ್ಷಣಾಧಿಕಾರಿ. ದೂರು ಮೇಲ್ವಿಚಾರಣೆ ಘಟಕ - ಪ್ರಮೀಳಾ, ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ. ಪೊಲೀಸ್- ಹನುಮಂತರಾಯ ಡಿಸಿಪಿ, ಮಾಧ್ಯಮ ಪ್ರಮಾಣೀಕರಣ ಮೇಲ್ವಿಚಾರಣೆ ಮತ್ತು ಪೈಡ್ ನ್ಯೂಸ್- ಬಿ.ಎ. ಖಾದರ್ ಶಾ, ಜಿಲ್ಲಾ ವಾರ್ತಾಧಿಕಾರಿ. ಆದಾಯ ತೆರಿಗೆ- ಆರ್ ಎನ್ ಸಿದ್ದಪ್ಪಾಜಿ ಅಪರ ಆದಾಯ ತೆರಿಗೆ ಆಯುಕ್ತರು. ಎಚ್‌ಆರ್‌ಎಮ್‌ಎಸ್‌_ ಡಾ. ಬಿ.ಎಸ್.ಹೇಮಲತಾ ಯೋಜನಾ ನಿರ್ದೇಶಕರು, ಐಟಿಡಿಪಿ ಇಲಾಖೆ, ಮಂಗಳೂರು. ಅಬಕಾರಿ- ಶೈಲಜಾ ಎ. ಖೋಟೆ ಅಬಕಾರಿ ಉಪ ಆಯುಕ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News