ಕಮಲ್ ಹಾಸನ್ ರಾಜಕೀಯ ಪ್ರವೇಶದ ಬಗ್ಗೆ ರಜಿನಿ ಹೇಳಿದ್ದು ಹೀಗೆ…

Update: 2018-02-23 16:27 GMT

ಚೆನ್ನೈ, ಫೆ.23: ರಾಜಕೀಯ ಪ್ರವೇಶಿಸಿ ತನ್ನದೇ ಪಕ್ಷ ಮಕ್ಕಳ್ ನೀಧಿ ಮಯ್ಯಂ ಸ್ಥಾಪಿಸಿರುವ ನಟ ಕಮಲ್ ಹಾಸನ್‌ರನ್ನು ಮುಕ್ತಕಂಠದಿಂದ ಹೊಗಳಿರುವ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಒಬ್ಬ ಸಮರ್ಥ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಕಮಲ್ ಹಾಸನ್ ಓರ್ವ ಸಮರ್ಥ ವ್ಯಕ್ತಿಯಾಗಿದ್ದ ಅವರು ಖಂಡಿತವಾಗಿಯೂ ಜನರ ನಂಬಿಕೆಯನ್ನು ಗಳಿಸಲಿದ್ದಾರೆ ಎಂದು ರಜನಿಕಾಂತ್ ತಿಳಿಸಿದ್ದಾರೆ.

ಖುದ್ದು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಸನ್ನದ್ಧರಾಗಿರುವ ರಜನಿಕಾಂತ್ ಅವರಲ್ಲಿ ಕಮಲ್ ಹಾಸನ್ ಸ್ಥಾಪಿಸಿರುವ ನೂತನ ಪಕ್ಷದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ನನ್ನು ಮತ್ತು ಕಮಲ್ ಹಾದಿ ಬೇರೆಯಾಗಿರಬಹುದು. ಆದರೆ ನಮ್ಮ ಗುರಿ ಮಾತ್ರ ಜನರ ಕಲ್ಯಾಣ ಎಂದು ರಜನಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಫೆಬ್ರವರಿ 21ರಂದು ನಡೆದ ಕಮಲ್ ಹಾಸನ್‌ರ ಪಕ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮವು ಉತ್ತಮವಾಗಿತ್ತು. ನಾನು ಈಗಾಗಲೇ ಅವರಿಗೆ ಶುಭಾಶಯ ಕೋರಿದ್ದೇನೆ ಎಂದು ರಜನಿ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಹೊಸ ಪಕ್ಷಕ್ಕೆ ಚಾಲನೆ ನೀಡುವುದಕ್ಕೂ ಮೊದಲು ಕಮಲ್, ರಜನಿಕಾಂತ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಂತರ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯವರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News