×
Ad

ಸಿರಿಯನ್ನರ ನೆರವಿಗೆ ಧಾವಿಸಿದ ರವೀಂದರ್ ಸಿಂಗ್ ರ ‘ಖಾಲ್ಸಾ ಏಡ್’

Update: 2018-03-01 21:28 IST

ವಿಶ್ವಸಂಸ್ಥೆ, ಮಾ.1ಸಿರಿಯದ ಪೂರ್ವ ಘೌಟದಲ್ಲಿ ಸರಕಾರಿ ಪಡೆಗಳು ನಾಗರಿಕರ ಮಾರಣಹೋಮ ನಡೆಸುತ್ತಿರುವಂತೆಯೇ, ಜಾತಿ, ಧರ್ಮಗಳ ಎಲ್ಲೆಗಳನ್ನು ಮೀರಿ ನಿಂತಿರುವ ಸ್ವಯಂಸೇವಾ ಸಂಘಟನೆಗಳು ಸಂತ್ರಸ್ತರ ನೆರವಿಗೆ ಧಾವಿಸುತ್ತಿವೆ.

ಅಂತಾರಾಷ್ಟ್ರೀಯ ಸರಕಾರೇತರ ಸಂಘಟನೆಯಾಗಿರುವ ‘ಖಾಲ್ಸಾ ಏಡ್’ ಸಿರಿಯದ ಸಂತ್ರಸ್ತರ ಆರೈಕೆಯಲ್ಲಿ ತೊಡಗಿದೆ.

ಈ ಸಂಘಟನೆಯ ಕಾರ್ಯಕರ್ತರು ಯುದ್ಧಪೀಡಿತ ಸಿರಿಯದಲ್ಲಿ ಸಂತ್ರಸ್ತರಿಗೆ ಉಚಿತ ಆಹಾರ, ಆಶ್ರಯ ಮತ್ತು ಆರೋಗ್ಯ ಸೇವೆಗಳನ್ನು ನೀಡುತ್ತಿದ್ದಾರೆ.

ಸ್ಥಾಪನೆ

1999ರಲ್ಲಿ ಕೊಸೊವೊ ನಿರಾಶ್ರಿತರ ಯಾತನೆಗೆ ಮರುಗಿದ ರವೀಂದರ್ ಸಿಂಗ್, ‘ಜಗತ್ತಿನಾದ್ಯಂತ ಆಂತರಿಕ ಯುದ್ಧ ನಡೆಯುತ್ತಿರುವ ಸ್ಥಳಗಳಲ್ಲಿ ಮಾನವೀಯ ನೆರವನ್ನು ನೀಡುವ ಉದ್ದೇಶದಿಂದ’’ ಈ ಪರೋಪಕಾರಿ ಸಂಸ್ಥೆಯನ್ನು ಸ್ಥಾಪಿಸಿದರು.

‘‘ಇಡೀ ಮಾನವ ಜನಾಂಗವನ್ನು ಒಂದೇ ಎಂಬುದಾಗಿ ಭಾವಿಸು’’ ಎಂಬ ಸಿಖ್ ಬೋಧನೆಯಲ್ಲಿ ಈ ಸಂಸ್ಥೆ ನಂಬಿಕೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News