×
Ad

ಕುಂದಾಪುರ: ಜಾಗದಲ್ಲಿ ಪಾಲು ನೀಡದಕ್ಕೆ ವೀಪರಿತ ಮದ್ಯ ಸೇವಿಸಿ ಮೃತ್ಯು

Update: 2018-03-04 22:31 IST

ಕುಂದಾಪುರ, ಮಾ.4: ಜಾಗದಲ್ಲಿ ಪಾಲು ನೀಡದ ಚಿಂತೆಯಲ್ಲಿ ವಿಪರೀತ ಮದ್ಯ ಸೇವಿಸಿ ಮರಣ ಪತ್ರ ಬರೆದಿಟ್ಟು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಾ.4ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ವೆಂಕಟೇಶ ಬಚ್ಚ ಪೂಜಾರಿ(63) ಎಂದು ಗುರುತಿಸಲಾಗಿದೆ.

ಮೃತ ವೆಂಕಟೇಶ್ ಅವರ ಕಿಸೆಯಲ್ಲಿ ಪತ್ರ ಪತ್ತೆಯಾಗಿದ್ದು, ಅದರಲ್ಲಿ ನನ್ನ ಸಾವಿಗೆ ಕಾರಣ ಭಾಸ್ಕರ ಕಾರಣ ಎಂಬುದಾಗಿ ಬರೆಯಲಾಗಿತ್ತು ಎನ್ನಲಾಗಿದೆ.

ಭಾಸ್ಕರ ಎಂಬವರು ವೆಂಕಟೇಶ್ ಅವರ ಅಣ್ಣನ ಮಗನಾಗಿದ್ದು, ಅವರು ವೆಂಕಟೇಶ್ ಅವರಿಗೆ ಸೇರಬೇಕಾಗಿದ್ದ ಜಾಗದ ಆಸ್ತಿಯಲ್ಲಿ ಪಾಲು ನೀಡದ ಚಿಂತೆಯಲ್ಲಿ ವಿಪರೀತ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ ಎಂದು ಮೃತರ ಮಗಳು ರೇಖಾ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News