ಎಡರಂಗದ ಸೋಲು ಭಾರತಕ್ಕೆ ವಿನಾಶಕಾರಿ : ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

Update: 2018-03-05 14:19 GMT

ಹೊಸದಿಲ್ಲಿ, ಮಾ.5: ಎಡಪಂಥೀಯ ಧೋರಣೆಯ ರಾಜಕೀಯ ಪಕ್ಷಗಳ ಸೋಲು ಭಾರತದ ಪಾಲಿಗೆ ವಿನಾಶಕಾರಿಯಾಗಿ ಪರಿಣಮಿಸಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ರವಿವಾರ ಅಭಿಪ್ರಾಯಪಟ್ಟಿದ್ದಾರೆ.

ನಾವು ಎಡರಂಗದ ವಿರುದ್ಧ ಹೋರಾಟ ನಡೆಸುತ್ತೇವೆ ಮತ್ತು ನಾವು ರಾಜಕೀಯ ಶತ್ರುಗಳು ಕೂಡಾ. ಆದರೆ ಭಾರತವು ಎಡರಂಗದ ನಾಶವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿರುವನಂತಪುರಂನಲ್ಲಿ ನಡೆದ ಶಿಲ್ಪಿ ಲೌರಿ ಬೇಕರ್ ಅವರ ಜನ್ಮಶತಮಾನೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಜೈರಾಮ್ ರಮೇಶ್ ಅಭಿಪ್ರಾಯ ಪಟ್ಟರು. ಎಡರಂಗ ಕೂಡಾ ಬದಲಾಗಬೇಕು ಮತ್ತು ಜನರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ತ್ರಿಪುರದಲ್ಲಿ 25 ವರ್ಷಗಳ ಆಳ್ವಿಕೆ ನಡೆಸಿದ ಎಡರಂಗ ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಕೇವಲ 16 ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಸದ್ಯ ಕೇವಲ ಕೇರಳದಲ್ಲಿ ಮಾತ್ರ ಎಡರಂಗ ಸರಕಾರವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News