ಮಹಿಳೆಗೆ ಕಿರುಕುಳ ಆರೋಪ: ದೂರು ದಾಖಲು

Update: 2018-03-08 14:03 GMT

ಕಡಬ, ಮಾ.8: ಮಹಿಳೆಯೋರ್ವರು ಒಬ್ಬಂಟಿಯಾಗಿದ್ದ ವೇಳೆ ಅಕ್ರಮವಾಗಿ ಮನೆಗೆ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿದ ಕುರಿತು ಸೆಂದಿಲ್ ಕುಮಾರ್ ಎಂಬಾತನ ವಿರುದ್ಧ ಮಹಿಳೆ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಠಾಣೆ ವ್ಯಾಪ್ತಿಯ ಓಟಕಜೆ ಸಿ ಆರ್ ಸಿ ಕಾಲನಿ ನಿವಾಸಿ ಸೆಂದಿಲ್‌ಕುಮಾರ್ ಎಂಬಾತ ಬುಧವಾರ ಅದೇ ಕಾಲನಿಯಲ್ಲಿನ ಮಹಿಳೆಯೋರ್ವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿದ್ದು, ಆ ವೇಳೆ ಬೊಬ್ಬೆ ಹಾಕಿದ್ದು, ನೆರೆಮನೆಯವರು ಆಗಮಿಸುವುದನ್ನು ಕಂಡ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನನ್ವಯ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News