ಬಿಜೆಪಿಗೆ ಸೇರ್ಪಡೆಯಾದ ನರೇಶ್ ಅಗರ್ವಾಲ್

Update: 2018-03-12 15:55 GMT

ಲಕ್ನೋ, ಮಾ. 12: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ನರೇಶ್ ಅಗರ್ವಾಲ್ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜ್ಯಸಭೆಯ ನಾಮಪತ್ರ ಸಲ್ಲಿಕೆಗೆ ಟಿಕೆಟ್ ನೀಡುವಲ್ಲಿ ತನಗಿಂತ ‘ನೃತ್ಯಗಾರರು ಹಾಗೂ ಚಲನಚಿತ್ರ ಕಲಾವಿದರಿಗೆ’ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಚಿತ್ರಜಗತ್ತಿನಲ್ಲಿ ಕೆಲಸ ಮಾಡುತ್ತಿರುವವರ ಜೊತೆಗೆ ನನ್ನನ್ನು ಹೋಲಿಸಲಾಗಿದೆ. ಚಿತ್ರದಲ್ಲಿ ನೃತ್ಯ ಮಾಡುವ, ಚಿತ್ರರಂಗದಲ್ಲಿ ಕೆಲಸ ಮಾಡುವರಿಗಾಗಿ ನನ್ನನ್ನು ತಿರಸ್ಕರಿಸಲಾಗಿದೆ. ಇದು ಸರಿಯೆಂದು ನನಗೆ ಅನ್ನಿಸುತ್ತಿಲ್ಲ. ಯಾರಿಗೂ ಇದು ಸರಿಯೆಂದು ಅನ್ನಿಸಲಾರದು ಎಂದು ಅವರು ಹೇಳಿದ್ದಾರೆ. ರಾಜ್ಯಸಭೆ ಚುನಾವಣೆಗೆ ಚಲನಚಿತ್ರ ನಟಿ ಜಯಾ ಬಚ್ಚನ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಹಿನ್ನೆಲೆಯಲ್ಲಿ ನರೇಶ್ ಅಗರ್ವಾಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಅಗರ್ವಾಲ್ ಅವರ ಅಧಿಕಾರಾವಧಿ ಶೀಘ್ರ ಕೊನೆಗೊಳ್ಳಲಿದೆ. ಅವರು ಜಯಾ ಬಚ್ಚನ್ ಅವರನ್ನು ನಾಮನಿರ್ದೇಶನಗೊಳಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ‘ಮನೆಗೆ ಬಂದಿರುವುದು’ ಎಂದು ವ್ಯಾಖ್ಯಾನಿಸಿರುವ ಅವರು, ಪಕ್ಷ ಏನನ್ನೂ ಬಯಸುತ್ತದೆಯೋ ಅದನ್ನು ನಿಶ್ಯರ್ತವಾಗಿ ಮಾಡಲು ತಾನು ಸಿದ್ಧ ಎಂದಿದ್ದಾರೆ. ನಾನು ರಾಜ್ಯ ಸಭಾ ಟಿಕೆಟ್‌ಗಾಗಿ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಅಥವಾ ಬಿಜೆಪಿಗೆ ಯಾವುದೇ ಶರತ್ತು ವಿಧಿಸಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News