ಉಡುಪಿ ಜಿಲ್ಲಾ ವಕ್ಫ್ ಅಧ್ಯಕ್ಷರಾಗಿ ಕೆ.ಪಿ.ಇಬ್ರಾಹಿಂ ಮಟಪಾಡಿ

Update: 2018-03-19 14:24 GMT

ಉಡುಪಿ, ಮಾ.19: ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೂತನ ಅಧ್ಯಕ್ಷರಾಗಿ ಹಾಜಿ ಕೆ.ಪಿ.ಇಬ್ರಾಹಿಂ ಮಟಪಾಡಿ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.

ಸಮಿತಿಯ ಉಪಾಧ್ಯಕ್ಷರುಗಳಾಗಿ ಗುಲಾಂ ಅಹಮ್ಮದ್ ಹೆಜಮಾಡಿ ಮತ್ತು ಅಬ್ದುಲ್ ಖಾದರ್ ಯೂಸುಫ್ ಕೆ., ಸದಸ್ಯರುಗಳಾಗಿ ಹಬೀಬ್ ಅಲಿ, ಇಸ್ಮಾಯಿಲ್ ಮೌಲಾನ, ಟಿ.ಹುಸೇನ್ ಸಾಹೇಬ್, ಬಿ.ಎಸ್.ಶಂಶುದ್ದೀನ್, ಕಲೀಫ್ ಅಬ್ದುಲ್ ಮುನಾಫ್, ಮುಹಮ್ಮದ್ ಅಲಿ ಕುಂಜಿಮೋಣ್, ಶಾಭಾನ್, ಮುಹಮ್ಮದ್ ಗೌಸ್, ತಾಜೂದೀನ್ ಇಬ್ರಾಹಿಂ, ಫಾರುಕ್ ಸಾಹೇಬ್ ಬೈಕಾಡಿ, ಅಫ್ಜಲ್ ಸಾಹೇಬ್, ಹಾಜಿ ಅಬೂಬಕ್ಕರ್, ರಿಯಾಝ್ ಪಳ್ಳಿ, ನಾಸಿರ್ ಅಲಿ, ಅಝೀಜುದ್ದೀನ್ ರಿಜ್ವಾನ್ ಮೌಲಾನಾ, ಹಸನ್ ಶೇಖ್ ಅಹಮ್ಮದ್, ಅಬ್ದುಲ್ ಖಾದರ್, ಅಬ್ದುಲ್ ರೆಹಮಾನ್ ಕೆ. ಆಯ್ಕೆಯಾಗಿದ್ದಾರೆ.

ಅಧಿಕಾರ ಸ್ವೀಕಾರ:ನೂತನ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ಮಟಪಾಡಿ ಇಂದು ಜಿಲ್ಲಾ ವಕ್ಫ್ ಮಂಡಳಿಯ ಆಡಳಿತಾಧಿಕಾರಿಯಿಂದ ಅಧಿಕಾರವನ್ನು  ವಹಿಸಿಕೊಂಡರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳು ಹಾಗೂ ಜಿಲ್ಲಾ ವಕ್ಫ್ ಕಚೇರಿಯ ಅಧಿಕಾರಿಗಳಾದ ಮುಜಾಹಿದ್ ಪಾಶ, ನಾಜೀಯ ಮತ್ತು ಸಬೀಯ ಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News