ಮೂಡುಬಿದಿರೆ : ಅಲ್ಲಲ್ಲಿ ಕಳ್ಳತನಕ್ಕೆ ಯತ್ನ

Update: 2018-03-20 15:54 GMT

ಮೂಡುಬಿದಿರೆ, ಮಾ.20: ಇಲ್ಲಿನ ಕೊಡಂಗಲ್ಲು ವೇಣುಗೋಪಾಲ ಕಾಲನಿ ಮತ್ತು ಕೀರ್ತಿ ನಗರದ ಕೆಲವು ಮನೆಗಳಲ್ಲಿ ಸೋಮವಾರ ತಡರಾತ್ರಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ವೇಣುಗೋಪಾಲ ಕಾಲನಿಯ ರಮೇಶ್ ಆಚಾರ್ಯ ಅವರ ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯವರು ಎಚ್ಚೆತ್ತುಕೊಂಡಾಗ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹರೀಶ್ ಅವರ ಮನೆಯ ಹಿಂಬಾಗಿಲ ಬೀಗ ಮುರಿಯಲು ವಿಫಲ ಯತ್ನ ನಡೆಸಲಾಗಿದೆ. 

ಕೀರ್ತಿ ನಗರದಲ್ಲಿ ಸಿ.ಎನ್. ಮಧ್ಯಸ್ಥ ಅವರ ಮನೆಯಲ್ಲಿ ಸೊಳ್ಳೆ ಪರದೆ ಹರಿದು ಚಿಲಕ ತೆರೆಯುವ ವಿಫಲ ಯತ್ನದಲ್ಲಿ ಚೂರಿಯೊಂದು ಮನೆಯೊಳಗೆ ಬಿದ್ದಿದೆ. ಮೋಹನ ಪ್ರಭು ಅವರ ಮನೆಯ ಬಾಗಿಲು ತೆರೆದು ಒಳ ನುಗ್ಗಿದ ಕಳ್ಳರು ಕಪಾಟುಗಳನ್ನೂ ತೆರೆದು ಸಾವಿರ ರೂ ನಗದು ಸೆಳೆದಿದ್ದಾರೆ. ರಾಜೇಶ್ ಬಂಗೇರ ಅವರ ಮನೆಯ ಮುಂಬಾಗಿಲ ಗೇಟು ತೆರೆದು ಒಳಬರುವ ವಿಫಲ ಯತ್ನ ನಡೆದಿದೆ. ಇದೇ ವೇಳೆ ಮಾಹಿತಿ ಪಡೆದ ಪೋಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News