ಸುರತ್ಕಲ್‌: ತಾತ್ಕಾಲಿಕ ಮಾರುಕಟ್ಟೆ ಉದ್ಘಾಟನೆ

Update: 2018-03-24 18:00 GMT

ಸುರತ್ಕಲ್, ಮಾ.24: ಸುರತ್ಕಲ್‌ನಲ್ಲಿ ಅತ್ಯಾಧುನಿಕ ಸುಸಜ್ಜಿತ ಮಾರುಕಟ್ಟೆಯನ್ನು ಒಂದೂವರೆ ವರ್ಷದೊಳಗೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಮೊಯ್ದಿನ್ ಬಾವ ಹೇಳಿದರು.

ಸುರತ್ಕಲ್ ನ ತಾತ್ಕಾಲಿಕ ಮಾರುಕಟ್ಟೆಯನ್ನು ಶನಿವಾರ ಶಾಸಕ ಮೊಯ್ದಿನ್ ಬಾವ ಉದ್ಘಾಟಿಸಿ ಮಾತನಾಡಿದರು. ನೂತನ ಮಾರುಕಟ್ಟೆ ನಿರ್ಮಾಣ ವಾಗುವ ವರೆಗೆ ವ್ಯಾಪಾರಿಗಳ ಹಿತ ದೃಷ್ಟಿಯಿಂದ ಅವರ ಅನುಕೂಲಕ್ಕೆ ತಕ್ಕಂತೆ ಪಾಲಿಕೆ ವತಿಯಿಂದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಹೊಸ ಮಾರುಕಟ್ಟೆ ನಿರ್ಮಾಣವಾದ ಬಳಿಕ ನೂತನ ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು ಎಂದರು.

ಅಭಿವೃದ್ಧಿಯಲ್ಲಿ ಜನತೆ ಕೈ ಜೋಡಿಸಿದಾಗ ನಮಗೂ ಹೆಚ್ಚಿನ ಉತ್ಸಾಹ ಬರುತ್ತದೆ. ಇದುವರೆಗೂ ಬಾರದ ಅನುದಾನವನ್ನು ಒಂದು ಕಾರ್ಪೊರೇಟರ್ ವಾರ್ಡ್ ಗೆ ಮುಖ್ಯಮಂತ್ರಿಗಳ ಸಹಕಾರದಿಂದ ತಂದಿದ್ದೇನೆ. ಸರ್ವ ಸೌಲಭ್ಯವುಳ್ಳ ಕಟ್ಟಡ ನಿರ್ಮಾಣವಾಗಿ ರಾಜ್ಯಕ್ಕೆ ಮಾದರಿ ಮಾರುಕಟ್ಟೆ ಪ್ರಾಂಗಣವಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸಂದರ್ಭ ಉಪಮೇಯರ್ ಮುಹಮ್ಮದ್, ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಮಂಗಳೂರು ಬಾವ, ವಲಯಾಯುಕ್ತ ರವಿಶಂಕರ್, ಪಾಲಿಕೆ ಎಂಜಿನಿಯರ್‌ಗಳಾದ ಕೃಷ್ಣ ಮೂರ್ತಿ ರೆಡ್ಡಿ, ಖಾದರ್, ವ್ಯಾಪಾರಿಗಳ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News