ಜಿಲ್ಲಾಧ್ಯಾಕ್ಷರಾಗಿ ನ್ಯಾಯಾವಾದಿ ಎ.ಪಿ.ಮುಜಾವರ್, ಪ್ರಧಾನ ಕಾರ್ಯದರ್ಶಿಯಾಗಿ ತಲ್ಹಾ ಸಿದ್ದಿಬಾಪ

Update: 2018-03-30 14:56 GMT

ಶಿರಸಿ, ಮಾ. 30: ಉತ್ತರಕನ್ನಡ ಜಿಲ್ಲೆಯ ಸಮಸ್ತ ಸುನ್ನಿ, ಸಲಫಿ, ತಬ್ಲಿಗಿ ವಿಚಾರಧಾರೆಯ ಜಿಲ್ಲಾ ಮುಸ್ಲಿಮ್ ಒಕ್ಕೂಟ ರಾಬ್ತೆ ಮಿಲ್ಲತ್‌ ಅಸ್ತಿತ್ವಕ್ಕೆ ಬಂದಿದ್ದು ಜಿಲ್ಲಾಧ್ಯಕ್ಷರಾಗಿ ಹಳಿಯಾಳದ ನ್ಯಾಯಾವಾದಿ ಅಝೀಮುದ್ದೀನ್ ಮುಜಾವರ್, ಪ್ರಧಾನ ಕಾರ್ಯದರ್ಶಿಯಾಗಿ ಭಟ್ಕಳದ ಮುಹಮ್ಮದ್ ತಲ್ಹಾ ಸರ್ವಾನುಮತದೊಂದಿಗೆ ಆಯ್ಕೆಯಾಗಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯೂಸೂಫ್ ಕನ್ನಿ ಅಧ್ಯಕ್ಷತೆಯಲ್ಲಿ ಶಿರಸಿಯ ಮನಿಯಾರ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಮಸ್ತ ಮುಸ್ಲಿಮ ಮುಖಂಡರ ಸಭೆಯಲ್ಲಿ ಈ ನೇಮಕ ನಡೆಯಿತು.

ಉಪಾಧ್ಯಕ್ಷರುಗಳಾಗಿ ಶಿರಸಿಯ ಮೌಲಾನ ಅಬ್ದುಲ್ ಶಹೀದ್, ಅಬ್ದುಲ್ ಬಷೀರ್ ಹೊನ್ನಾವರದ ಮುಹಮ್ಮದ್ ಅಶ್ಫಾಖ್, ಹಳಿಯಾಳದ ರಿಝ್ವಾನ್, ಕಾರವಾರದ ಮುಹಮ್ಮದ್ ಮನ್ಸೂರ್, ಹಾಗೂ ವಲ್ಕಿಯ ಮುಹಿದ್ದೀನ್ ಸಾಹೇಬ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಕುಮಟಾದ ಮುಝಫ್ಫರ್, ಅಬ್ದುಲ್ ಕಾದಿರ್ ಮುಂಡಗೋಡ, ಮುಹಮ್ಮದ್ ಯೂಸೂಫ್ ಮೊಗದ್ ಯಲ್ಲಾಪುರ, ಮುಹಮ್ಮದ್ ನಝೀರ್ ಸಿದ್ಧಾಪುರ, ಹಾಗೂ ಎಂ.ಆರ್.ಮಾನ್ವಿ ಭಟ್ಕಳ ಆಯ್ಕೆಯಾಗಿದ್ದಾರೆ.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯೂಸೂಫ್ ಕನ್ನಿ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಒಗ್ಗೂಡಿಸಿ ರಾಬ್ತೆ ಮಿಲ್ಲತ್‌ ಎಂಬ ಹೆಸರಿನೊಂದಿಗೆ ಜಿಲ್ಲಾ ಮಟ್ಟದ ಮುಸ್ಲಿಮ್ ಒಕ್ಕೂಟವನ್ನು ಸ್ಥಾಪಿಸಲಾಗುತ್ತಿದ್ದು ಇದುವರೆಗೆ ರಾಜ್ಯದ 25 ಜಿಲ್ಲೆಗಳಲ್ಲಿ ಈ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಈಗ ನೂತನವಾಗಿ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಮುಸ್ಲಿಮರಲ್ಲಿ ಒಗ್ಗಟ್ಟನ್ನು ಸ್ಥಾಪಿಸುವುದು, ಮುಸ್ಲಿಮರ ಸೊತ್ತು, ವಿತ್ತ, ಜೀವವನ್ನು ರಕ್ಷಿಸುವುದು ಹಾಗೂ ಹಿಂದು-ಮುಸ್ಲಿವರು ಪರಸ್ಪರ ಅರಿತುಕೊಂಡು ಶಾಂತಿ, ಸೌಹಾರ್ದತೆಯೊಂದಿಗೆ ಜೀವಿಸುವುದರ ಮೂಲಕ ದೇಶದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸುವುದು ಈ ಮೂರು ಉದ್ದೇಶಗಳೊಂದಿಗೆ ಒಕ್ಕೂಟ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ. ರಾಜಕೀಯದ ಯಾವುದೇ ವಿಷಯವು ಈ ಒಕ್ಕೂಟದ ಸಂಬಂಧಿಸುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಪ್ರಸ್ತಾವಿಕ ಮಾತನಾಡಿದ ಶಿವಮೊಗ್ಗ ವಿಭಾಗ ಸಂಚಾಲಕ ಮೌಲಾನ ಸಲೀಮ್ ಉಮರಿ ಮುಸ್ಲಿಮ ಸಮುದಾಯದಲ್ಲಿ ಹಲವು ವಿಚಾರಧಾರೆ, ಪಂಗಡಗಳಿದ್ದು ಅವೆಲ್ಲವನ್ನು ಬದಿಗಿಟ್ಟು ಸಮುದಾಯದ ಒಳಿತಿಗಾಗಿ ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸಬೇಕು. ಇಲ್ಲಿನ ಹಿಂದೂ-ಮುಸ್ಲಿಮ ಮತ್ತಿತರರ ಧರ್ಮಿಯರ ನಡುವೆ ಏರ್ಪಟ್ಟಿರುವ ಅಂತರವನ್ನು ದೂರಮಾಡಿ ನಾವೆಲ್ಲರೂ ಈ ದೇಶದ ಪ್ರಜೆಗಳೆಂಬ ನೆಲೆಯಲ್ಲಿ ಒಂದಾಗಬೇಕು ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News