ಚಿಕ್ಕಮಗಳೂರಿನ ಯುವಕ ಕಾಸರಗೋಡಿನಲ್ಲಿ ಆತ್ಮಹತ್ಯೆ

Update: 2018-04-02 12:44 GMT

ಕಾಸರಗೋಡು, ಎ. 2: ಚೂರಿಯಿಂದ  ಕತ್ತು ಕೊಯ್ದು ಚಿಕ್ಕಮಗಳೂರಿನ ಯುವಕನೋರ್ವ ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ಕಾಸರಗೋಡು ನಗರ ಹೊರವಲಯದ ಚೆರ್ಕಳ ಪಾಣಲಂ ಎಂಬಲ್ಲಿ ನಡೆದಿದೆ.

ಮೃತರನ್ನು  ಚಿಕ್ಕಮಗಳೂರಿನ ಹರೀಶ್ ನಾಯ್ಕ್  (30) ಎಂದು ಗುರುತಿಸಲಾಗಿದೆ.

ಇಂದು ಮಧ್ಯಾಹ್ನ ಚೆರ್ಕಳ ಪಾಣಲಂ ನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ  ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತಲಪಿದ ಹರೀಶ್ ಅಲ್ಲಿದ್ದ ಕತ್ತಿ ತೆಗೆದು ರಸ್ತೆ ಬದಿಯ ಪೊದೆಯೆಡೆಗೆ ಓಡಿ ಕತ್ತನ್ನು ಕೊಯ್ದಿಕೊಂಡು ಸ್ಥಳದಲ್ಲೇ ಮೃತಪಟ್ಟನೆನ್ನಲಾಗಿದೆ.

ಕೃತ್ಯಕ್ಕೆ ಕಾರಣ  ತಿಳಿದು ಬಂದಿಲ್ಲ . ವಿದ್ಯಾನಗರ ಠಾಣೆ  ಪೊಲೀಸರು ಸ್ಥಳಕ್ಕಾಗಮಿಸಿ, ತನಿಖೆ ಆರಂಭಿಸಿದ್ದಾರೆ.

ಯುವಕನ ಕಿಸೆಯಲ್ಲಿದ್ದ ಗುರುತು ಚೀಟಿಯ ಸಹಾಯದಿಂದ ಆತನ ಗುರುತು ಪತ್ತೆಹಚ್ಚಲಾಯಿತು. ಈತ  ಪಾನ್ ಮಸಾಲ ಮಾರಾಟಗಾರ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಮಗಳೂರು ಪೊಲೀಸರನ್ನು ಸಂಪರ್ಕಿಸಿದ ವಿದ್ಯಾನಗರ ಠಾಣೆ ಪೊಲೀಸರು ಈತನ ಮಾಹಿತಿ ಕಲೆ ಹಾಕಿದ್ದಾರೆ.

ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ವಿದ್ಯಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ  ಡಿ ವೈ ಎಸ್ ಪಿ  ವಿ . ಸುಕುಮಾರನ್ , ವಿದ್ಯಾನಗರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್  ಬಾಬು ಪೆರಿಂಗೋತ್, ಸಬ್  ಇನ್ಸ್ ಪೆಕ್ಟರ್  ವಿನೋದ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News