×
Ad

ಇದಾರ-ಎ-ಫೈಝೆ ರಸೂಲ್ ಸಂಸ್ಥೆಯಿಂದ ಮಾಂಕಾಳ್ ವೈದ್ಯರಿಗೆ ಬೆಂಬಲ

Update: 2018-04-02 21:09 IST

ಭಟ್ಕಳ, ಎ. 2: ತಾಲೂಕಿನ ಇದಾರ-ಎ- ಫೈಝೆ ರಸೂಲ್ ಸಂಸ್ಥೆ ಈ ಬಾರಿಯ ಚುನಾವಣೆಯಲ್ಲಿ ಮಂಕಾಳ ವೈದ್ಯರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಸಂಘಟನೆ ಖಾಜಾ ಹಸನ್ ಕಲೈವಾಲಾ ತಿಳಿಸಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇದಾರ-ಎ-ಫೈಝೆ ರಸೂಲ್ ಸಂಘಟನೆಯು ಸುನ್ನಿ, ದಖನಿ, ತಂಗರಕರ ಜನತೆಯ ಸಂಘಟನೆಯಾಗಿದ್ದು ಭಟ್ಕಳ ಮತದಾರ ಕ್ಷೇತ್ರದಲ್ಲಿ ಸಂಘಟನೆಯ ಹತ್ತು ಸಾವಿರಕ್ಕೂ ಹೆಚ್ಚು ಜನರಿದ್ದೇವೆ. ನಾವು ಈ ಬಾರಿ ಒಮ್ಮತದಿಂದ ಮಂಕಾಳ ವೈದ್ಯರು ಯಾವುದೇ ಪಕ್ಷದಲ್ಲಿ ನಿಂತರೂ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದೂ ಹೇಳಿದರು.

ಈ ಸಂದರ್ಭ ಮಾತನಾಡಿದ ಸಂಘಟನೆಯ ಪ್ರಮುಖ ಮುನೀರ್ ಅಹಮ್ಮದ್, ಮುಂದಿನ ಚುನಾವಣೆಯಲ್ಲಿ ನಾವು ಪಕ್ಷಾತೀತವಾಗಿ ಮಂಕಾಳ ವೈದ್ಯರಿಗೆ ಬೆಂಬಲ ನೀಡುತ್ತೇವೆ. ಈ ಹಿಂದೆ ಎಲ್ಲಾ ಚುನಾವಣೆಗಳಲ್ಲಿ ನಮ್ಮನ್ನು ಗಣನೆಗೆ ತೆಗೆದುಕೊಳ್ಳದೇ ಕೆಲವು ಸಂಘಟನೆಗಳು ತಾವೇ ಮುಸ್ಲಿಂ ಓಟುಗಳನ್ನು ಕೊಡಿಸುತ್ತೇವೆನ್ನುವಂತೆ ಪೋಸು ಕೊಡುತ್ತಿರುವುದು ಗಮನಕ್ಕೆ ಬಂದಿದೆ. ನಮ್ಮನ್ನು ಕಡೆಗಣಿಸಲಾಗುತ್ತಿರುವುದರಿಂದ ನಾವು ಈ ಬಾರಿ ಚುನಾವಣೆಯಲ್ಲಿ ನಮ್ಮದೇ ನಿರ್ಧಾರ ಕೈಗೊಂಡಿದ್ದೇವೆ ಒಂದು ಓಟು ಕೂಡಾ ಬೇರೆ ಯಾವುದೇ ಸಂಘಟನೆ ಹೇಳಿದರೆ ಹಾಕಲು ನಾವು ತಯಾರಿಲ್ಲ ಎಂದರು.

ಕಳೆದ ಐದು ವರ್ಷಗಳಲ್ಲಿ ಬಡವರ ಪರವಾಗಿ ಅತ್ಯಂತ ಉತ್ತಮ ಕೆಲಸವಾಗಿದೆ. ಶಾಸಕ ಮಂಕಾಳ ವೈದ್ಯ ಅವರು ಬಡವರ ಕಣ್ಣೀರು ಒರೆಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ವದಗಿಸಿದ್ದಾರೆ. ಅನೇಕ ಮನೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ವಿದ್ಯುತ್ ಇಲ್ಲದೇ ತೊಂದರೆಯಾಗಿತ್ತು. ಸಾವಿರಾರು ಮನೆಗಳಿಗೆ ವಿದ್ಯುತ್ ನೀಡಿದ ಅವರು ಮಕ್ಕಳ ಭವಿಷ್ಯ ಬರೆದಿದ್ದಾರೆ. ಬಡವರ ಪರವಾಗಿರುವ ಎಕೈಕ ಶಾಸಕ ಎಂದು ತೋರಿಸಿಕೊಟ್ಟ ಅವರಿಗೆ ನಮ್ಮ ಸಂಸ್ಥೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಫಾರೂಕಿ ಮಾತನಾಡಿ, ನಮ್ಮ ಸಂಸ್ಥೆಯು ರಾಜಕೀಯೇತರ ಸಂಸ್ಥೆಯಾಗಿದ್ದು ನಮ್ಮ ದೇಶದ ಸಂಸ್ಕೃತಿಯನ್ನು, ಸಾರಭೌಮತ್ವನ್ನು ಎತ್ತಿ ಹಿಡಿಯುವತ್ತ ನಮ್ಮ ಪ್ರಯತ್ನ ಸಾಗಿದೆ. ಶರಣರನ್ನು, ಸೂಫಿ ಸಂತರನ್ನು ಆರಾಧಿಸುವ ನಾವು ಸಮಾಜದ ಒಳಿತಿಗಾಗಿ ಶ್ರಮಿಸುತ್ತೇವೆ. ಈ ಚುನಾವಣೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಪಕ್ಷೇತರ ಅಭ್ಯರ್ಥಿ ನಿಲ್ಲಿಸಲು ಯೋಚಿಸಿದ್ದೆವು. ಆದರೆ ಅದನ್ನು ಕೈಬಿಟ್ಟು ನಮ್ಮ ಕ್ಷೇತ್ರದಲ್ಲಿ ಉತ್ತಮ, ಬಡವರ ಪರವಾಗಿ ಕೆಲಸ ಮಾಡಿದ, ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಶ್ರಮಿಸುತ್ತಿರುವ ಮಂಕಾಳ ವೈದ್ಯ ಅವರನ್ನು ಬೆಂಬಲಿಸಲು ಒಕ್ಕರಲ ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅಬ್ದುಲ್ ಸತ್ತಾರ್, ಮೌಲಾನಾ ಮುಹಮ್ಮದ್ ಅಕ್ರಮಿ, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News