×
Ad

ಅಂದರ್‌ಬಾಹರ್: ನಾಲ್ವರ ಬಂಧನ

Update: 2018-04-02 22:32 IST

ಉಡುಪಿ, ಎ.2: 76 ಬಡಗಬೆಟ್ಟು ಗ್ರಾಮದ ಪಣಿಯಾಡಿ ಎಂಬಲ್ಲಿ ಎ.1 ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅತ್ರಾಡಿ ಸೇಡಿಗುಡ್ಡೆಯ ಸುಧಾಕರ ಶೇರಿಗಾರ(24), ಬಾಗಲ ಕೋಟೆಯ ಮನೋಜ್(26), ಬಡುವಪ್ಪ(26), ಪಣಿಯಾಡಿಯ ಮಂಜು ನಾಥ ನಾಯ್ಕ್(38) ಎಂದು ಗುರುತಿಸಲಾಗಿದೆ. ಬಂಧಿತರಿಂದ 4,050ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿ ರವಿ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News