ಎ.14 ರೊಳಗೆ ಹೆಸರು ನೋಂದಾಯಿಸಲು ಸರಕಾರಿ ಅಧಿಕಾರಿಗಳಿಗೆ ಸೂಚನೆ
ಮಂಗಳೂರು, ಎ. 10: ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನಸಭಾ ಚುನಾವಣೆ ಕರ್ತವ್ಯ ನಿರ್ವಹಿಸಲು ದ.ಕ. ಜಿಲ್ಲೆಯ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಾಗೂ ಅದರ ಅಧೀನಕ್ಕೊಳಪಟ್ಟ ಸಂಸ್ಥೆಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಯವರನ್ನು ನೇಮಕ ಮಾಡಲಾಗುವುದು.
ಆಯೋಗದ ನಿರ್ದೇಶನದಂತೆ ನೇಮಕ ಮಾಡಲಾಗುವ ಇಂತಹ ಅಧಿಕಾರಿ, ಸಿಬ್ಬಂದಿಯರಿಗೆ ಮತದಾನ ಹಕ್ಕನ್ನು ನೀಡೇಬೇಕಾಗಿದೆ. ಇವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಆದರೂ ಸಾರ್ವಜನಿಕ, ಕೇಂದ್ರ, ರಾಜ್ಯ ಸರಕಾರಿ ಸಿಬ್ಬಂದಿಗಳ ಹೆಸರು ಪಟ್ಟಿಯಲ್ಲಿ ನೋಂದಾವಣೆಯಾಗದಿದ್ದರೆ ಅವರು ಕೂಡಲೇ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಬೇಕು.
ಈ ಬಗ್ಗೆ ceokarnataka.kar.nic.in ನ್ನು ಸಂಪರ್ಕಿಸಿ ಆನ್ಲೈನ್ ಮೂಲಕ ಎಪ್ರಿಲ್ 14ರೊಳಗೆ ಮನವಿ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಸೆಸಿಕಾಂತ್ ಸೆಂಥಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.