ಯೋಗಗುರು ರಾಮ್ ದೇವ್- ತೆಲಂಗಾಣ ಸಿಎಂ ಪುತ್ರಿ ಸಂಸದೆ ಕವಿತಾ ಭೇಟಿ

Update: 2018-04-10 17:08 GMT

ನಿಝಾಮಾಬಾದ್,ಎ.10: ಯೋಗಗುರು ಬಾಬಾ ರಾಮ್ ದೇವ್ ಇಂದು ನಿಝಾಮಾಬಾದ್ ಸಂಸದೆ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾರನ್ನು ಭೇಟಿಯಾಗಿದ್ದು, ಈ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕವಿತಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮ್ ದೇವ್, “ರೈತರ ಪರವಾಗಿರುವ ಕೆ. ಚಂದ್ರಶೇಖರ್ ರಾವ್ ಪರ ನಾನಿದ್ದೇನೆ. ಈ ದೇಶದಲ್ಲಿ ಕೆಸಿಆರ್ ರವರಂತಹ ಮುಖ್ಯಮಂತ್ರಿಯನ್ನು ಇದುವರೆಗೂ ನೋಡಿಲ್ಲ. ಅವರು ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ” ಎಂದರು.

“ತೆಲಂಗಾಣ ರಾಷ್ಟ್ರ ಸಮಿತಿಯು ಹೋರಾಟಗಳಿಂದ ಮೇಲೆ ಬಂದ ಪಕ್ಷವಾಗಿದ್ದು, ನಿಷ್ಠೆಯಿಂದ ಕೆಲಸ ಮಾಡಲಿದೆ ಎಂದ ಅವರು. ಟಿಆರ್ ಎಸ್ ಗೆ ಬೆಂಬಲ ನೀಡುವುದಾಗಿ ಹೇಳಿದರು.

ಬಾಬಾ ರಾಮ್ ದೇವ್ ಹಾಗು ಸಂಸದೆ ಕವಿತಾ ಭೇಟಿಯ ನಂತರ ರಾಜಕೀಯ ವಲಯದಲ್ಲಿ ರಾಮ್ ದೇವ್ ತೃತೀಯರಂಗ ಬೆಂಬಲ ನೀಡಲಿದ್ದಾರೆಯೇ ಎನ್ನುವ ಚರ್ಚೆಯು ಆರಂಭಗೊಂಡಿದೆ. ಇದೇ ಕಾರಣಕ್ಕಾಗಿ ರಾಮ್ ದೇವ್ ಕೆಸಿಆರ್ ಪುತ್ರಿಯನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News