×
Ad

ಸಪಲಿಗರ ಯಾನೆ ಗಾಣಿಗರ ಸಂಘದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

Update: 2018-04-16 23:20 IST

ಮಂಗಳೂರು, ಎ. 16: ಸಪಲಿಗರ ಯಾನೆ ಗಾಣಿಗರ ಸೇವಾ ಸಂಘದ ಆಶ್ರಯದಲ್ಲಿ ಮೂಡಬಿದ್ರೆ ದವಾಳ ಕಾಲೇಜಿನಲ್ಲಿ ನಡೆದ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಜಿವೈಎಸ್‌ಪಿ ತಂಡವು ಮುನ್ಕೂರ್ ಗಾಣಿಗ ತಂಡವನ್ನು ಸೋಲಿಸಿ 2018ರ ಗಾಣಿಗ ಟ್ರೋಫಿಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಜಿವೈಎಸ್‌ಪಿ ತಂಡವನ್ನು ನವೀನ್, ಕಿಶೋರ್, ಸಂದೀಪ್, ದೀಕ್ಷಿತ್, ಜೀವಿತ್, ಲವಿತ್ ಮತ್ತು ವಿಕಾಸ್ ಮುನ್ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News