ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ರಮಾನಾಥ ರೈ ನಾಮಪತ್ರ ಸಲ್ಲಿಕೆ

Update: 2018-04-19 09:56 GMT

ಬಂಟ್ವಾಳ, ಎ. 19 : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ರಮಾನಾಥ ರೈ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.

ಬಿ.ಸಿರೋಡಿನಲ್ಲಿರುವ ಪಕ್ಷ ಕಚೇರಿಯಿಂದ ಪಕ್ಷದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ತಾಲೂಕು ಮಿನಿ ಸೌಧಕ್ಕೆ  ತೆರಳಿ ನಾಮಪತ್ರ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಎಂ.ಎಸ್.ಮುಹಮ್ಮದ್, ಮಾಯಿಲಪ್ಪ ಸಾಲಿಯಾನ್, ರಾಮಕೃಷ್ಣ ಆಳ್ವ, ಮುಹಮ್ಮದ್ ನಂದರ್ಬೆಟ್ಟು, ಚಂದ್ರಪ್ರಕಾಶ್ ಶೆಟ್ಟಿ, ಜಯಂತಿ, ಮಲ್ಲಿಕಾ, ಉಮರ್ ಪಜೀರ್ , ಬೇಬಿ ಕುಂದರ್, ಜನಾರ್ದನ ಚಂಡ್ತಿಮಾರ್, ಬಿ.ಎಚ್.  ಖಾದರ್, ಉಸ್ಮಾನ್ ಕರೋಪಾಡಿ, ಸವಿತಾ ಸನಿಲ್,  ಶೋಭಿತ್,  ಜಾಸ್ಮಿನ್ ಡಿಸೋಜ, ಕಣಚೂರು ಮೋನು,  ಇಬ್ರಾಹಿಂ ಕೋಡಿಜಾಲ್, ಉಮರ್ ಫಾರೂಕ್, ರಾಜಶೇಖರ ಕೋಟ್ಯಾನ್ , ಸಂಜೀವ ಪೂಜಾರಿ, ಯು.ವೆಂಕಟೇಶ್,  ಮಮತಾ ಗಟ್ಟಿ, ಶಶಿಧರ್ ಹೆಗ್ಡೆ, ಜಿಲ್ಲಾ ಪದಾಧಿಕಾರಿಗಳು, ಪಿತಾಂಬರ್ ಪೆರಾಜೆ, ಅಬ್ಬಾಸ್ ಅಲಿ, ಜಗದೀಶ್ ಕೊಯಿಲ, ಅಬ್ದುಲ್ಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News