ಬಂದರು: ಸಿಡಿಲು ಮಳೆಗೆ ತೇಲುವ ರೆಸ್ಟೋರೆಂಟ್ ಬೋಟ್‌ಗೆ ಹಾನಿ

Update: 2018-04-20 05:08 GMT

ಮಂಗಳೂರು, ಎ.20: ನಗರದ ಹಳೆಬಂದರಿನಲ್ಲಿ ತೇಲುವ ರೆಸ್ಟೋರೆಂಟ್ ಎಂದೇ ಕರೆಯಲಾಗುವ ಕ್ರೂಸ್ ಆ್ಯಂಡ್ ಡೈನ್ ರೆಸ್ಟೋರೆಂಟ್‌ಗೆ ಬುಧವಾರ ರಾತ್ರಿ ಸಿಡಿಲು ಬಡಿದು ಹಾನಿಯಾಗಿರುವ ಘಟನೆ ನಡೆದಿದೆ.

ನೀರಿನಲ್ಲಿ ತೇಲಾಡುವ ಈ ರೆಸ್ಟೋರೆಂಟ್ ಒಳಗೊಂಡಿರುವ ಬೋಟ್ ಮಂಗಳೂರಿನ ಚರಣ್ ಎಂಬವರಿಗೆ ಸೇರಿದೆ ಎಂದು ಹೇಳಲಾಗಿದೆ. ಧಕ್ಕೆಯ ಬಳಿ ನೀರಿನಲ್ಲಿರುವ ಈ ಬೋಟ್ ಮೀನುಗಾರಿಕೆಗೆ ಬಳಕೆಯಾಗದೆ, ರೆಸ್ಟೋರೆಂಟ್ ನಡೆಸಲಾಗುತ್ತಿದೆ.

ಬುಧವಾರ ರಾತ್ರಿ ಸಿಡಿಲು, ಮಿಂಚು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ರೆಸ್ಟೋರೆಂಟ್‌ಗೆ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News